ADVERTISEMENT

ಮಾಜಿ ಸಿಎಂ ಯಡಿಯೂರಪ್ಪ ಅವರ ಸಲಹೆಗಾರರನ್ನು ಕರ್ತವ್ಯದಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 10:11 IST
Last Updated 3 ಆಗಸ್ಟ್ 2021, 10:11 IST
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಮತ್ತು ಎನ್‌.ಆರ್‌.ಸಂತೋಷ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

ಹುದ್ದೆ ಕಳೆದುಕೊಂಡ ಇತರರು: ಎಂ.ಆರ್‌.ದೊರೆಸ್ವಾಮಿ– ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಮೋಹನ್‌ ಲಿಂಬಿಕಾಯಿ– ಕಾನೂನು ಸಲಹೆಗಾರರು, ಎನ್‌.ಭೃಂಗೇಶ್‌– ಮಾಧ್ಯಮ ಸಲಹೆಗಾರರು ಬೇಳೂರು ಸುದರ್ಶನ– ಮುಖ್ಯಮಂತ್ರಿಯವರ ಇ–ಆಡಳಿತ ಸುಧಾರಣೆ ಸಲಹೆಗಾರರು, ಸುನಿಲ್‌ ಜಿ.ಎಸ್‌– ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ, ಪ್ರಶಾಂತ್‌ ಪ್ರಕಾಶ್‌– ನೀತಿ ನಿರೂಪಣೆ ಮತ್ತು ಕಾರ್ಯತಂತ್ರ ಸಲಹೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT