ADVERTISEMENT

ಆರ್‌ಎಸ್‌ಎಸ್‌, ಬಿಜೆಪಿಯಿಂದ ದೇಶ ಮುಕ್ತಗೊಳಿಸಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:16 IST
Last Updated 18 ಜನವರಿ 2023, 23:16 IST
ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ನ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ (ಎಡದಿಂದ) ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕಾರ್ಮಿಕ ಸಂಘಟನೆಗಳ ಜಾಗತಿಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪಂಬೀಸ್ ಕ್ರಿಸ್ಟಿಸಿಸ್, ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ.ಹೇಮಲತಾ, ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಸುಬ್ಬರಾವ್‌, ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಎಐಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಅಮರ್ ಜಿತ್ ಕೌರ್, ಎಲ್.ಪಿ.ಎಫ್ ಮುಖಂಡ ವೇಲುಸ್ವಾಮಿ, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಐ.ಎನ್.ಟಿ.ಯು.ಸಿ ರಾಷ್ಟ್ರೀಯ ಮುಖಂಡರು ಚಂದ್ರಶೇಖರ್, ಎಐಯುಟಿಯುಸಿ ರಾಷ್ಟ್ರೀಯ ಮುಖಂಡರು ಸೋಮಶೇಖರ್ ಮತ್ತು ಸೆಲ್ಫ್ ಎಂಪ್ಲಾಯಿಸ್ ಯೂನಿಯನ್ ರಾಷ್ಟ್ರೀಯ ಮುಖಂಡರಾದ ಸೋನಿಯಾ ಜಾರ್ಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ನ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ (ಎಡದಿಂದ) ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕಾರ್ಮಿಕ ಸಂಘಟನೆಗಳ ಜಾಗತಿಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪಂಬೀಸ್ ಕ್ರಿಸ್ಟಿಸಿಸ್, ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ.ಹೇಮಲತಾ, ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಸುಬ್ಬರಾವ್‌, ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಎಐಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಅಮರ್ ಜಿತ್ ಕೌರ್, ಎಲ್.ಪಿ.ಎಫ್ ಮುಖಂಡ ವೇಲುಸ್ವಾಮಿ, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಐ.ಎನ್.ಟಿ.ಯು.ಸಿ ರಾಷ್ಟ್ರೀಯ ಮುಖಂಡರು ಚಂದ್ರಶೇಖರ್, ಎಐಯುಟಿಯುಸಿ ರಾಷ್ಟ್ರೀಯ ಮುಖಂಡರು ಸೋಮಶೇಖರ್ ಮತ್ತು ಸೆಲ್ಫ್ ಎಂಪ್ಲಾಯಿಸ್ ಯೂನಿಯನ್ ರಾಷ್ಟ್ರೀಯ ಮುಖಂಡರಾದ ಸೋನಿಯಾ ಜಾರ್ಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನಪರವಾದ ನೀತಿಗಳು ರಚನೆಯಾಗಲು ದುಡಿಯುವ ವರ್ಗವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಮತ್ತು ದೇಶವನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಿಂದ ಮುಕ್ತಗೊಳಿಸಬೇಕು ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ನ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಮುಖಂಡರು ಕರೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಬುಧವಾರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖಂಡರು, ‘ವಿಭಜನಕಾರಿ ನೀತಿ ಗಳಿಂದ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಹಾಗೂ ದೇಶಕ್ಕೆ ಮಾರಕ ವಾಗಿರುವ ಕೇಂದ್ರ ಸರ್ಕಾರವನ್ನು ರೈತ–ಕಾರ್ಮಿಕ ಚಳವಳಿಗಳಿಂದ ಕಿತ್ತು ಹಾಕಬೇಕು’ ಎಂದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಸುಬ್ಬರಾವ್‌ ಮಾತನಾಡಿ, ‘ದೇಶ ಇಂದು ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷ ವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಸಮಾಜ ದಲ್ಲಿ ಅಸಮಾನತೆ ಉಂಟು ಮಾಡುತ್ತಿವೆ. ಮೂಲಭೂತವಾದಿಗಳು ದುಡಿಯುವ ವರ್ಗವನ್ನು ವಿಭಜಿಸುತ್ತಿವೆ’ ಎಂದು ಹೇಳಿದರು.

ADVERTISEMENT

ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ಮಾತನಾಡಿ, ‘ಪ‍್ರಜಾಸತ್ತಾತ್ಮಕ ಹಕ್ಕು ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾಧಿಸಲು ಮಾರಕವಾಗಿರುವ ನೀತಿಗಳ ವಿರುದ್ಧ ದೇಶದಾದ್ಯಂತ ಎಲ್ಲರೂ ಒಂದು ಗೂಡಿ ಹೋರಾಡಬೇಕಿದೆ’ ಎಂದರು.

ಸಿಐಟಿಯು ಮುಖಂಡರಾದ ಕೆ.ಹೇಮಲತಾ ಮಾತನಾಡಿ, ‘ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಮಾಡಲಾಗುತ್ತದೆ’ ಎಂದರು.

‘ದುಡಿಯುವ ವರ್ಗಕ್ಕೆ ಮಾರಕ ವಾಗಿರುವ ನೀತಿಗಳನ್ನು ಜಾರಿಗೆ ತಂದಿರುವ ಈ ಕೇಂದ್ರ ಸರ್ಕಾರ ತೊಲಗಬೇಕು. ನಮ್ಮ ದೇಶವನ್ನು ರಕ್ಷಿಸಬೇಕಾದರೆ, ದೇಶವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಕ್ತವಾಗಿಸಬೇಕು’ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್‌ ಕೌರ್‌ ಹೇಳಿದರು.

ಕೋಲಾರದಿಂದ ಹುತಾತ್ಮರ ಜ್ಯೋತಿ
ಕೋಲಾರ ಚಿನ್ನದ ಗಣಿಯ ಹುತಾತ್ಮಕರ ಸ್ಮರಣಾರ್ಥ ಕೋಲಾರವೆಲ್ಲ ಸುತ್ತಿ ಸಮ್ಮೇ‌ಳನಕ್ಕೆ ಬಂದ ‘ಕೆಜಿಎಫ್‌ ಹುತಾತ್ಮರ ಜ್ಯೋತಿಗೆ’ ಸಿಐಟಿಯು ಮುಖಂಡರಾದ ಕೆ. ಹೇಮಲತಾ ಗೌರವ ಸಲ್ಲಿಸಿದರು. ಸಿಐಟಿಯು ಧ್ವಜಾರೋಹಣ ಮಾಡಿದ ಹೇಮಲತಾ ಅವರಿಗೆ ‘ಕೆಂಪು ಸ್ವಯಂಸೇವಕರು’ ಗೌರವವಂದನೆ ನೀಡಿದರು. 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 1,500 ಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.