ಹಾವೇರಿ:ಸ್ವಾತಂತ್ರ್ಯ ಹೋರಾಟಗಾರ, ತಾಲ್ಲೂಕಿನ ನೆಗಳೂರ ಗ್ರಾಮದ ಪರಮನಗೌಡ ಲಿಂಗನಗೌಡ ಹರಕಂಗಿ(93) ಶನಿವಾರ ಬೆಳಿಗ್ಗೆ 3 ಗಂಟೆಗೆ ನಿಧನರಾದರು.
ಮೈಲಾರ ಮಹಾದೇವಪ್ಪ ಮತ್ತಿತರ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಜತೆ ಚಳವಳಿಯಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರ್ಯದ ಬಳಿಕವೂ ದೇಶಪ್ರೇಮದ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿದ್ದರು.
ಈಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರಪತಿ ಮತ್ತು ಪ್ರಧಾನಿ ಜತೆಗಿನ ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಚಹಾ ಕೂಟದಲ್ಲಿ ಇವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.