ಬಾಗಲಕೋಟೆ: ಸೋನಿಯಾಗಾಂಧಿ ವಿದೇಶದಿಂದ ಬಂದು ಇಲ್ಲಿ ಪ್ರಭಾವ ಬೀರಿರುವುದು ಆಶ್ಚರ್ಯ ಮೂಡಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಕಲಾದಗಿ ಗ್ರಾಮ ವಾಸ್ತವ್ಯದ ನಂತರ ಭಾನುವಾರ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ರಾಜಕೀಯ ನಿವೃತ್ತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಹಳ ವರ್ಷ ಕೆಲಸ ಮಾಡಿದ್ದಾರೆ. ಅವರು ಅಧ್ಯಕ್ಷರಾಗಿದ್ದಾಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಸೋನಿಯಾಗಾಂಧಿಗೆ ಒಳ್ಳೆಯದಾಗಲಿ ಎಂದರು.
ಕಾಂಗ್ರೆಸ್ ಪಕ್ಷ ಯಾವಗಲೂ ವಿದೇಶದವರನ್ನೇ ನಂಬಿಕೊಂಡು ಬಂದಿದೆ. ಕಾಂಗ್ರೆಸ್ ಪಾರ್ಟಿ ಆರಂಭಿಸಿದ್ದೇ ಒಬ್ಬ ವಿದೇಶಿ ವ್ಯಕ್ತಿ. ಅದರ ಅಂತ್ಯನೂ ಸಹ ವಿದೇಶದ ವ್ಯಕ್ತಿಯಿಂದಲೇ ಆಯಿತು ಎಂದರು.
ಇಡೀ ಪ್ರಪಂಚವನ್ನೇ ಆಳುವಂತಹ ಶಕ್ತಿ ದೇಶಕ್ಕಿದೆ. ಇಲ್ಲಿನ ಮೂಲದವರು ಬ್ರಿಟನ್ ಪ್ರಧಾನಿಯಾಗಿದ್ದಾರೆ. ಅಮೆರಿಕದ ಸೆನೆಟ್ ನಲ್ಲೂ ಸದಸ್ಯರಾಗಿದ್ದಾರೆ. ಆದರೆ, ಕಾಂಗ್ರೆಸ್ ಗೆ ಒಬ್ಬ ಅಧ್ಯಕ್ಷ ಸಿಗದ್ದರಿಂದ ಸೋನಿಯಾಗಾಂಧಿ ಅವರೇ ಅಧ್ಯಕ್ಷರಾಗಿದ್ದರು ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.