ADVERTISEMENT

ಫೋನುಗಳೆಲ್ಲ ಸ್ವಿಚ್ಡ್‌ ಆಫ್!

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:45 IST
Last Updated 4 ಆಗಸ್ಟ್ 2019, 19:45 IST

ಹಾಸನ: ಜಿಲ್ಲೆಯಲ್ಲಿ ‘ಗೌಡಾ’ ಪಡೆದವರ ಪೈಕಿ ರಿಯಲ್‌ ಎಸ್ಟೇಟ್‌ ಉದ್ಯಮಿ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ವಾಮೀಜಿ ಸಹ ಇದ್ದಾರೆ.

ಏಜೆಂಟರಿಗೆ ₹50 ಸಾವಿರದಿಂದ ₹1 ಲಕ್ಷ ನೀಡಿದರೆ, ಪದವಿ ಸ್ವೀಕರಿಸುವಂತೆ ಸಂಬಂಧಪಟ್ಟ ವಿ.ವಿಯಿಂದ ಮನೆಗೇ ಪತ್ರ ಬರುತ್ತದೆ. ಹೈನುಗಾರಿಕೆ ಜತೆಗೆ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿರುವ ಕೊಣನೂರಿನ ವ್ಯಕ್ತಿಯೊಬ್ಬರಿಗೆ, ಸಾಮಾಜಿಕ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.

‘ಗೌಡಾ’ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ, ಬಹುತೇಕರು ತಮ್ಮ ಮೊಬೈಲ್‌ ಸ್ವಿಚ್ಡ್ ಆಫ್‌ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.