ADVERTISEMENT

ಒಡವೆ ಸಾಲ: ಬಡ್ಡಿ ಮೇಲಿನ ಸಬ್ಸಿಡಿ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:52 IST
Last Updated 26 ಜನವರಿ 2020, 19:52 IST
   

ಬೆಂಗಳೂರು: ರೈತರು ಒಡವೆ ಅಡವಿಟ್ಟುಬೆಳೆ ಸಾಲ ಪಡೆದಿದ್ದು, ಈ ಸಾಲದ ಬಡ್ಡಿ ಮೇಲಿನ ಸಬ್ಸಿಡಿಯನ್ನು ಬ್ಯಾಂಕ್‌ಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದ್ದು, ಲೇವಾದೇವಿದಾರರಿಗೆ ರೈತರು ಶರಣಾಗುವಂತೆ ಮಾಡಿದೆ. ಮತ್ತೊಂದೆಡೆ ಬ್ಯಾಂಕ್‌ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನಮೂಲಕ ಕೇಂದ್ರ ಲಪಟಾಯಿಸುತ್ತಿದೆ ಎಂದು ಟ್ವಿಟ್‌ಮಾಡಿ ಆರೋಪಿಸಿದ್ದಾರೆ.

ಸಬ್ಸಿಡಿಯನ್ನು ಕೇಂದ್ರ ನೀಡದಿದ್ದರೆ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.