ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ 4ನೇ ಶನಿವಾರ ರಜೆ ನೀಡಿದೆ. ಕಾಲೇಜು ಉಪನ್ಯಾಸಕರಿಗೆಸಾಂದರ್ಭಿಕ ರಜೆ ಈ ಹಿಂದಿನಂತೆಯೇ ಇರುತ್ತದೆಯೇ, ಇಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದುಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಆಗ್ರಹಿಸಿದೆ.
ಉಪನ್ಯಾಸಕರಿಗೆ ಸಾಂದರ್ಭಿಕ ರಜೆ ಈ ಹಿಂದೆ ಇದ್ದಂತೆ ವಾರ್ಷಿಕ 15+2 ಮುಂದುವರಿಯಬೇಕು. ಇಲ್ಲವಾದರೆಪ್ರತಿ ತಿಂಗಳ 4ನೇ ಶನಿವಾರ ರಜಾದಿನವನ್ನಾಗಿ ಘೋಷಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಜಿ.ನಾರಾಯಣ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.