ADVERTISEMENT

ನಮ್ಮ ನಾಯಕ ಸಿದ್ದರಾಮಯ್ಯನವರೇ, ತಪ್ಪೇನಿದೆ?

ಸಚಿವ ರಾಜಶೇಖರ ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:05 IST
Last Updated 31 ಜನವರಿ 2019, 20:05 IST
ರಾಜಶೇಖರ ಪಾಟೀಲ
ರಾಜಶೇಖರ ಪಾಟೀಲ   

ಕೊಪ್ಪಳ: 'ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಬೇರೆ, ಬೇರೆ. ನಮ್ಮ ನಾಯಕ ಸಿದ್ದರಾಮಯ್ಯ. ರಾಜ್ಯದ ಮುಖ್ಯಮಂತ್ರಿ ಎಚ್‌.ಡಿಕುಮಾರಸ್ವಾಮಿಯೇ. ಇದರಲ್ಲಿತಪ್ಪೇನಿದೆ' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಪ್ರಶ್ನಿಸಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, 'ಮುಖ್ಯಮಂತ್ರಿ ಎಲ್ಲರಿಗೂ ಒಬ್ಬರೆ. ಆದರೆ, ಅವರವರ ನಾಯಕರು ಬೇರೆ, ಬೇರೆಯೇ ಇರುತ್ತಾರೆ' ಎಂದರು.

ಬರ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ತಂಡದ ನೇತೃತ್ವ ವಹಿಸಿದ್ದ ಬಂಡೆಪ್ಪ ಕಾಶೆಂಪುರ ಅವರು 'ರಾಯರಡ್ಡಿ ಹೇಳಿಕೆಗೆ ಅಷ್ಟೊಂದು ಮಹತ್ವ ನೀಡಬೇಕಿಲ್ಲ' ಎಂದು ಹೇಳಿ ಮುಂದೆ ಹೋದರು. ಜೊತೆಗೆ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.