ADVERTISEMENT

ಮಡಿಕೇರಿ: ಬೇಟೆ ವೇಳೆ ಗುಂಡೇಟಿಗೆ ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 19:31 IST
Last Updated 15 ಆಗಸ್ಟ್ 2020, 19:31 IST
ಶಿವ ಬೋಪ‍ಣ್ಣ
ಶಿವ ಬೋಪ‍ಣ್ಣ   

ಮಡಿಕೇರಿ: ತಾಲ್ಲೂಕಿನ ಮಕ್ಕಂದೂರು ಸಮೀಪದ ಉದಯಗಿರಿಯಲ್ಲಿ ಶುಕ್ರವಾರ ರಾತ್ರಿ ಬೇಟೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.

ಮಡಿಕೇರಿ ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ಶಿವಬೋಪಣ್ಣ (37) ಮೃತಪಟ್ಟ ವ್ಯಕ್ತಿ.

ರಾಜೇಶ್ವರಿ ನಗರದ ದೇವಯ್ಯ ಅವರು ಹಾರಿಸಿದ ಗುಂಡು ಶಿವಬೋಪಣ್ಣಗೆ ತಗುಲಿದೆ. ಜೊತೆಗಿದ್ದ ಶರಣ್‌ ಎಂಬುವವರಿಗೆ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.