ADVERTISEMENT

13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:21 IST
Last Updated 8 ಜುಲೈ 2025, 16:21 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ರಾಜ್ಯದ ಆರು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಸೇರಿದಂತೆ 13 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ವರ್ಗಾವಣೆಗೊಂಡವರು: ಝೆಹೆರಾ ನಸೀಮ್‌ – ಪ್ರಾದೇಶಿಕ ಆಯುಕ್ತೆ, ಕಲಬುರಗಿ ವಿಭಾಗ. ಟಿ. ಭೂಬಾಲನ್– ಸಿಇಒ, ಇ–ಆಡಳಿತ ಕೇಂದ್ರ. ಬಿ. ಸುಶೀಲಾ– ಎಂ.ಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ. ಕೆ. ಆನಂದ– ಜಿಲ್ಲಾಧಿಕಾರಿ, ವಿಜಯನಗರ. ಪಡ್ವೆ ರಾಹುಲ್‌ ತುಕಾರಾಂ– ಹೆಚ್ಚುವರಿ ಆಯುಕ್ತ, ಶಾಲಾ ಶಿಕ್ಷಣ ಇಲಾಖೆ, ಕಲುಬುರಗಿ. ಭೋಯಾಲ್‌ ಹರ್ಷಲ್‌ ನಾರಾಯಣರಾವ್‌– ಜಿಲ್ಲಾಧಿಕಾರಿ, ಯಾದಗಿರಿ. ದಿಲೀಶ್ ಸಸಿ– ಸಿಇಒ, ಜಿಲ್ಲಾ ಪಂಚಾಯಿತಿ, ಉತ್ತರ ಕನ್ನಡ. ಈಶ್ವರ ಕುಮಾರ್ ಕಂಡೂ– ಸಿಇಒ, ಜಿಲ್ಲಾ ಪಂಚಾಯಿತಿ, ರಾಯಚೂರು. ಶಶಿಧರ್ ಕುರೇರಾ– ಜಂಟಿ ನಿರ್ದೇಶಕ, ಕೆಯುಐಡಿಎಫ್‌ಸಿ. ಎಸ್‌. ಆಕಾಶ್– ಸಿಇಒ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ. ಅಪರ್ಣಾ ರಮೇಶ್– ನಿರ್ದೇಶಕಿ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್), ಎಚ್‌ಎಂಆರ್‌ಎಸ್‌ 2.0. ನರ್ವಡೆ ವಿನಾಯಕ ಕರ್ಭಾರಿ– ಸಿಇಒ, ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ. ಆರ್‌. ಯತೀಶ್– ಸಿಇಒ, ಜಿಲ್ಲಾ ಪಂಚಾಯಿತಿ, ಬೆಂಗಳೂರು ನಗರ ಜಿಲ್ಲೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.