ADVERTISEMENT

ಆಯುಷ್‌ ಇಲಾಖೆ ಆಯುಕ್ತರಾಗಿ ಮಂಜುನಾಥ್‌ ವರ್ಗ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 21:11 IST
Last Updated 7 ಡಿಸೆಂಬರ್ 2022, 21:11 IST

ಬೆಂಗಳೂರು: ಐಎಎಸ್‌ ಅಧಿಕಾರಿ ಮಂಜುನಾಥ್‌ ಜೆ. ಅವರನ್ನು ಆಯುಷ್‌ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಗೊಂಡಿರುವ ಇತರ ಐಎಎಸ್ ಅಧಿಕಾರಿಗಳು; ಸುಷ್ಮಾ ಗೋಡ್‌ಬೋಲೆ– ಮುಖ್ಯ ಮೌಲ್ಯಮಾಪನ ಅಧಿಕಾರಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ. ಡಾ.ಅರುಂಧತಿ ಚಂದ್ರಶೇಖರ್– ಆಯುಕ್ತೆ, ಖಜಾನೆ ಇಲಾಖೆ. ನಂದಿನಿದೇವಿ– ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ. ಡಾ.ನವೀನ್‌ ಭಟ್‌– ಯೋಜನಾ ನಿರ್ದೇಶಕ, ರಾಷ್ಟ್ರೀಯ ಆರೋಗ್ಯ ಮಿಷನ್‌. ಬಸವರಾಜು ಬಿ.ಎ–ಕುಲಸಚಿವ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT