ಹುಬ್ಬಳ್ಳಿ: ‘ಕಾಣೆಯಾಗಿರುವ ರಾಜ್ಯದ ಮೀನುಗಾರರ ಪತ್ತೆಗಾಗಿ ಇಸ್ರೊ ನೆರವು ಕೋರಲಾಗಿದೆ. ಮಹಾರಾಷ್ಟ್ರದ ಕರಾವಳಿಯನ್ನು ಪ್ರವೇಶಿಸಿದ ರಾಜ್ಯದ ಮೀನುಗಾರರನ್ನು ಅಲ್ಲಿಯ ಮೀನುಗಾರರು ಅಪಹರಣ ಮಾಡಿ, ರತ್ನಗಿರಿ, ಸಿಂಧುದುರ್ಗದಲ್ಲಿ ಇರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆದಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
‘ರಾಜ್ಯದ ಕರಾವಳಿ ಮೀನುಗಾರರಿಗೆ ಮಹಾರಾಷ್ಟ್ರದ ಮೀನುಗಾರರು ಆಗಾಗ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಈ ಸಂಬಂಧ ಮಹಾರಾಷ್ಟ್ರ ಗೃಹಸಚಿವರಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಭೇಟಿ ಮಾಡಿ ಚರ್ಚಿಸುತ್ತೇನೆ. ಎರಡೂ ರಾಜ್ಯಗಳ ಮೀನುಗಾರರ ನಡುವೆ ಸೌಹಾರ್ದವಾತಾವರಣ ನಿರ್ಮಾಣಕ್ಕೆ ಪ್ರಯತ್ನಿ
ಸಲಾಗುವುದು’ ಎಂದು ಹೇಳಿದರು.
ಸೂಕ್ತ ತೀರ್ಮಾನ: ‘ಕಾನ್ಸ್ಟೆಬಲ್ಗಳು ಪೊಲೀಸ್ ಇಲಾಖೆಯ ಬೆನ್ನೆಲುಬು ಆಗಿದ್ದಾರೆ. ಅವರ ಜೀವನಮಟ್ಟ ಸುಧಾರಣೆಗಾಗಿ ಔರಾದಕರ್ ಸಮಿತಿ ವರದಿಯ ಜಾರಿಗೆ ಸಂಬಂಧಿಸಿ ಸಚಿವ ಸಂಪುಟ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.