ADVERTISEMENT

ಕಲಬುರ್ಗಿಯಲ್ಲಿ 20 ಎಕರೆ ವಿಸ್ತಾರದಲ್ಲಿ ಅನುಭವ ‌ಮಂಟಪ ನಿರ್ಮಾಣಕ್ಕೆ ₹20‌ ಕೋಟಿ

ಬಿಎಸ್‌ವೈ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 8:35 IST
Last Updated 17 ಸೆಪ್ಟೆಂಬರ್ 2019, 8:35 IST
   

ಕಲಬುರ್ಗಿ: 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಮಾದರಿಯಲ್ಲಿ ಕಲಬುರ್ಗಿಯಲ್ಲಿ 20 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ಕಲ್ಯಾಣ ‌ಕರ್ನಾಟಕವನ್ನಾಗಿ ಘೋಷಿಸಿದ್ದಕ್ಕಾಗಿ ಈ ಭಾಗದ ಮಠಾಧೀಶರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‌ಮಾತನಾಡಿದ ಅವರು, ಮೊದಲ ಹಂತದಲ್ಲಿ 15 ದಿನದೊಳಗಾಗಿ ₹20 ಕೋಟಿ ಬಿಡುಗಡೆ ‌ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ಮಠಾಧೀಶರು ಅನುಭವ ಮಂಟಪ ನಿರ್ಮಾಣದ ಬೇಡಿಕೆ ಇಟ್ಟಿದ್ದರು.

ಅಲ್ಲದೇ ವೀರಶೈವ ಸಮಾಜದ ವತಿಯಿಂದ ಕಲಬುರ್ಗಿಯಲ್ಲಿ ವಸತಿನಿಲಯ ನಿರ್ಮಿಸಲು ₹1 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ, ನನಗೆ ಮನುಷ್ಯ ಕುಲವೇ ಜಾತಿ. ವರ್ಗ, ವರ್ಣ, ಲಿಂಗ ಭೇದವಿಲ್ಲದೇ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಘೋಷಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಹಲವು‌ ಮಠಾಧೀಶರು, ಕಲ್ಯಾಣ ಕರ್ನಾಟಕ ಎಂದು ನಾಮಕರಣ ‌ಮಾಡಿದ ಯಡಿಯೂರಪ್ಪ ‌ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

ಕೆಲ ಮಠಾಧೀಶರು ಹೈದರಾಬಾದ್ ನಿಜಾಮನಿಂದ ವಿಮೋಚನೆ ಮಾಡಿದ ಸರ್ದಾರ್ ಪಟೇಲರಂತೆ ಯಡಿಯೂರಪ್ಪ ಆಧುನಿಕ ಸರ್ದಾರ್ ಪಟೇಲ್ ಎಂದು ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.