ಬೆಂಗಳೂರು: ಕಲಾಕದಂಬ ಆರ್ಟ್ ಸೆಂಟರ್ ನೀಡುವ ‘ಕಾಳಿಂಗ ನಾವಡ ಪ್ರಶಸ್ತಿ’ಗೆಮದ್ದಳೆ ಕಲಾವಿದಶಂಕರ ಭಾಗವತ ಯಲ್ಲಾಪುರ ಆಯ್ಕೆಯಾಗಿದ್ದಾರೆ.
ಅಂಬರೀಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ, ಮಮತಾ ಆರ್.ಕೆ., ಮುರಳೀಧರ ನಾವಡ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆಯು 11 ವರ್ಷಗಳಿಂದಯಕ್ಷಲೋಕದ ಹಿಮ್ಮೇಳ ಕಲಾವಿದರೊಬ್ಬರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂಬೆಳ್ಳಿತಟ್ಟೆಯನ್ನು ಒಳಗೊಂಡಿದೆ.
ಅ.31ರಂದು ಬೆಂಗಳೂರಿನ ಗವಿಪುರದಲ್ಲಿರುವ ಉದಯಭಾನು ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದುಸಂಸ್ಥೆಯ ನಿರ್ದೇಶಕ ರಾಧಾಕೃಷ್ಣ ಉರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.