ಬೆಂಗಳೂರು: ‘ಕನ್ನಡಿಗರಿಗೆ ತಮ್ಮ ನಿಜವಾದ ಶಕ್ತಿಯ ಅರಿವಿಲ್ಲ. ನಮ್ಮ ಕನ್ನಡ ಶಕ್ತಿಯ ಬಗ್ಗೆ ಎಚ್ಚರಿಸಲು ಮತ್ತೊಬ್ಬರು ಬರಬೇಕಾದ ದುಃಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಬೇಸರಿಸಿದರು.
ಪರಿಷತ್ತು ಮಂಗಳವಾರ ಹಮ್ಮಿ ಕೊಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡಿಗರು ಆಂಜನೇಯನ ವಂಶಸ್ಥರು. ಆಂಜನೇಯ ನಿಗಿರುವ ಅಗಾಧವಾದ ಶಕ್ತಿಯ ಬಗ್ಗೆ ಅರಿವು ಮೂಡಿಸಲು ಜಾಂಬವಂತ ಬರಬೇಕಾಯಿತು. ಕನ್ನಡಿಗರ ಸ್ಥಿತಿಯೂ ಹಾಗೇ ಆಗಿದೆ’ ಎಂದರು.
ಇತಿಹಾಸತಜ್ಞ ಎಚ್.ಎಸ್. ಗೋಪಾಲರಾವ್ ಮಾತನಾಡಿದರು. ಪರಿಷತ್ತಿನ ಗೌರವಕಾರ್ಯದರ್ಶಿ
ಗಳಾದ ನೇ.ಭ.ರಾಮಲಿಂಗಶೆಟ್ಟಿ, ಕೆ. ಮಹಾಲಿಂಗಯ್ಯ ಹಾಗೂ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.