ADVERTISEMENT

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಅನರ್ಹಗೊಂಡಿದ್ದಾರೆ: ಶಿವರಾಮ‌ ಹೆಬ್ಬಾರ್

ಅನರ್ಹರ ಪೈಕಿ ಮೊದಲ ಗೆಲುವು ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 4:59 IST
Last Updated 9 ಡಿಸೆಂಬರ್ 2019, 4:59 IST
ಶಿವರಾಮ‌ ಹೆಬ್ಬಾರ್
ಶಿವರಾಮ‌ ಹೆಬ್ಬಾರ್   

ಶಿರಸಿ:‘ಇಷ್ಟು ದಿನ ನನ್ನನ್ನು ಅನರ್ಹ ಮಾಡಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರೇ ಇಂದು ಅನರ್ಹರಾಗಿದ್ದಾರೆ’ ಎಂದು ಯಲ್ಲಾಪುರದಲ್ಲಿ ಗೆಲುವು ಸಾಧಿಸಿರುವಬಿಜೆಪಿ ಅಭ್ಯರ್ಥಿ ಶಿವರಾಮ‌ ಹೆಬ್ಬಾರ್ ಹೇಳಿದರು.

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಪತನದ ವೇಳೆ ಅನರ್ಹಗೊಂಡು ಬಳಿಕ ಬಿಜೆಪಿ ಸೇರಿದಶಾಸಕರ ಪೈಕಿ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಇವರ ಚುನಾವಣೆ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಇದರೊಂದಿಗೆ ಹೆಬ್ಬಾರ್ ಅವರು ಅನರ್ಹರ ಪೈಕಿ ಮೊದಲ ಗೆಲುವು ದಾಖಲಿಸಿದಂತಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರು ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿಶೀಲ ರಾಜಕಾರಣ ಮಣೆ ಹಾಕಿದ್ದಾರೆ ಎಂದರು.

ADVERTISEMENT

‘ಕ್ಷೇತ್ರದ ಮತದಾರರ ಪ್ರೀತಿ, ಗೌರವ ಉಳಿಸಿಕೊಳ್ಳುವೆ. ಪ್ರತಿಸ್ಪರ್ಧಿ ಭೀಮಣ್ಣ ನಾಯ್ಕ ಒಳ್ಳೆಯ ವ್ಯಕ್ತಿ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

ಫಲಿತಾಂಶದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್ಸ್‌ ಇಲ್ಲಿ ಲಭ್ಯ:https://bit.ly/38hYeCJ

ಮಾಧ್ಯಮ ಕೇಂದ್ರದಲ್ಲಿ ಹೆಬ್ಬಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.