ADVERTISEMENT

Karnataka Covid update: ಸಕ್ರಿಯ ಪ್ರಕರಣ ಮತ್ತಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 19:49 IST
Last Updated 17 ಫೆಬ್ರುವರಿ 2022, 19:49 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಸದ್ಯ 19,761 ಸೋಂಕಿತರು ಇದ್ದಾರೆ.

ಸೋಂಕು ದೃಢ ಪ್ರಮಾಣ ಸಹ ಶೇ 1.74ಕ್ಕೆ ಇಳಿಕೆಯಾಗಿದ್ದು, 1,579 ಮಂದಿ ಕೋವಿಡ್ ಪೀಡಿತರಾಗಿರುವುದು ಗುರುವಾರ ದೃಢಪಟ್ಟಿದೆ.

ಬೆಂಗಳೂರಿನಲ್ಲಿ 769 ಮಂದಿ ಸೋಂಕಿತರಾಗಿದ್ದಾರೆ. ತುಮಕೂರಿನಲ್ಲಿ 84, ಮೈಸೂರಿನಲ್ಲಿ 83, ಬೆಳಗಾವಿಯಲ್ಲಿ 73, ಬಳ್ಳಾರಿಯಲ್ಲಿ 55 ಮಂದಿಕೋವಿಡ್ ಪೀಡಿತರಾಗಿದ್ದಾರೆ. ರಾಮನಗರದಲ್ಲಿ ಒಂದು ಪ್ರಕರಣ ಮಾತ್ರ ದೃಢಪ‍ಟ್ಟಿದೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 39.33 ಲಕ್ಷಕ್ಕೆ ಏರಿಕೆಯಾಗಿದೆ.

ADVERTISEMENT

ಕೊರೊನಾ ಸೋಂಕಿತರಲ್ಲಿ 23 ಮಂದಿ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲೇ ಏಳು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿಮರಣಪ್ರಮಾಣದರವು ಶೇ 1.45 ರಷ್ಟು ವರದಿಯಾಗಿದೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 39,738ಕ್ಕೆ ತಲುಪಿದೆ.

ಸೋಂಕಿತರಲ್ಲಿ ಬೆಂಗಳೂರಿನಲ್ಲಿ 1,889 ಮಂದಿ ಸೇರಿದಂತೆ ರಾಜ್ಯದಲ್ಲಿ 5,079 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.