ADVERTISEMENT

ಬಿಜೆಪಿಗೆ ಮತ ಕೊಟ್ಟರೆ ಪ್ರತಿ ವರ್ಷ ನಿವೇಶನ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 21:45 IST
Last Updated 25 ಫೆಬ್ರುವರಿ 2023, 21:45 IST
   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ‘ಇನ್ನು ಮುಂದೆ ಬಿಜೆಪಿಗೆ ಮತ ಹಾಕುತ್ತಲೇ ಇರಿ. ನಾವು ಪ್ರತಿ ವರ್ಷವೂ ನಿವೇಶನ ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಹೇಳಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪುರಸಭೆ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುಂಡ್ಲುಪೇಟೆಯಲ್ಲಿ 30 ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮಾಡಿರಲಿಲ್ಲ. ಬಡತನಕ್ಕೆ ಜಾತಿ, ಕುಲ, ಪಕ್ಷ ಎಂಬುದಿಲ್ಲ. ಅರ್ಹ ಬಡವರಿಗೆಲ್ಲರಿಗೂ ನಿವೇಶನ ಹಂಚುತ್ತೇವೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ₹ 600 ಕೋಟಿ ಕೊಟ್ಟಿದ್ದರು. ಆದರೆ, ಅಂದಿನ ಸರ್ಕಾರ ಜಾಗವನ್ನು ‌ಹುಡುಕಲಿಲ್ಲ. ನಾನು ಸಚಿವನಾದ ಬಳಿಕ 52 ಸಾವಿರ ಮನೆ ನಿರ್ಮಿಸಿ, 5 ಸಾವಿರ ಫಲಾನುಭವಿಗಳಿಗೆ ಹಂಚಲಾಗಿದೆ’ ಎಂದರು.

‘ಎಲ್ಲರೂ ಒಂದು ದಿನ ವಿದಾಯ ಹೇಳಲೇಬೇಕಲ್ಲವೇ? ಬಿ.ಎಸ್‌.ಯಡಿಯೂರಪ್ಪ ತಮ್ಮ ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು
ತೀರ್ಮಾನಿಸಿದ್ದಾರೆ. ಚುನಾವಣಾ ಕಣದಿಂದ ನಿವೃತ್ತಿ ಹೊಂದುವುದು ಒಳ್ಳೆಯದು ಅನಿಸಿರಬೇಕು. ದೇಶದಲ್ಲಿ ಬಹುತೇಕರು ಬಂದು
ಹೋಗಿದ್ದಾರೆ. ನಾನೂ ಮುಂದೊಂದು ದಿನ ವಿದಾಯ ಹೇಳಲೇಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.