ADVERTISEMENT

ಕರ್ನಾಟಕ ಹೈಕೋರ್ಟ್: ಮೂವರು ಹೊಸ ಎಎಜಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 14:35 IST
Last Updated 17 ಫೆಬ್ರುವರಿ 2026, 14:35 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹಾಲಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಾದ (ಎಎಜಿ) ಸಿ.ಎಸ್‌.ಪ್ರದೀಪ್, ಸಂತೋಷ್‌ ಎಸ್.ಗೋಗಿ ಮತ್ತು ಎನ್.ದೇವದಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಈ ತೆರವಾದ ಹುದ್ದೆಗಳಿಗೆ ಕ್ರಮವಾಗಿ ಹೈಕೋರ್ಟ್‌ ವಕೀಲರಾದ ಪ್ರದೀಪ್‌ ಗಾಂವಕರ್‌, ತಾರನಾಥ ಪೂಜಾರಿ ಮತ್ತು ಕೆ.ಶ್ರೀಕಾಂತ ಪಾಟೀಲ ಅವರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.