ಬೆಂಗಳೂರು: ಚೊಚ್ಚಲ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೃಷಿಕರಿಗೆ ಮತ್ತು ಬಡವರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಒಂದು ಕಿಲೋ ಪಾಮ್ ಎಣ್ಣೆ ಮತ್ತು ರಿಯಾಯಿತಿ ದರದಲ್ಲಿ ಅರ್ಧ ಕಿಲೋ ತೊಗರಿ ಬೆಳೆ ನೀಡುವುದಾಗಿ ಘೊಷಿಸಿದ್ದಾರೆ.
ಇನ್ನಷ್ಟು ಯೋಜನೆಗಳು
* ಬಿಪಿಎಲ್ ಕಾರ್ಡುದಾರರಿಗೆ 1 ಕಿಲೋ ಅಯೋಡಿನ್ ಉಪ್ಪು ಮತ್ತು 1 ಕಿಲೋ ಸಕ್ಕರೆ
* ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆ ಎಲ್ಲಾ ನಗರಗಳಿಗೆ ವಿಸ್ತರಣೆ
* ಬೆಂಗಳೂರಿನಲ್ಲಿ ಬಡವರಿಗೆ ಮನೆ ನಿರ್ಮಾಣ
* ಇಂದಿರಾ ಕ್ಯಾಂಟೀನ್ ಯೋಜನೆ ಮುಂದುವರಿಕೆ:ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 247 ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ನಿರ್ಧಾರ
* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ₹4000 ಕೋಟಿ ಅನುದಾನ
* ತೆಂಗು ಬೆಳೆಗಾರರ ಅಭಿವೃದ್ಧಿಗೆ ₹900 ಕೋಟಿ ರೂಪಾಯಿ ಮೀಸಲು
* ಕೃಷಿ ಇಲಾಖೆಗೆ ₹8000 ಕೋಟಿ ಅನುದಾನ
* ನೀರಾವರಿ ಯೋಜನೆಗಳಿಗೆ ₹18 ಸಾವಿರ ಕೋಟಿ
* ಸಿಎಂ ಮಾತೃಶ್ರೀ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಗರ್ಭಿಣಿಯರಿಗೆ ಮಾಸಿಕ ₹1,000 ಅನುದಾನ
*ವಿವಿಧ ಅಭಿವೃದ್ಧಿ ನಿಗಮಗಳಿಂದ ಅಂಗವಿಕಲರು ಪಡೆದಿರುವ ಸಾಲ ಮನ್ನಾ
*ವೃದ್ಧಾಪ್ಯ ವೇತನ ₹600ರಿಂದ ₹1000ಕ್ಕೆ ಹೆಚ್ಚಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.