ADVERTISEMENT

ಕೆ.ಎಂ. ಇಂದಿರೇಶ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:26 IST
Last Updated 27 ಮೇ 2020, 17:26 IST
   

ಬಾಗಲಕೋಟೆ: ಇಲ್ಲಿನ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಕೆ.ಎಂ.ಇಂದಿರೇಶ ಅವರನ್ನು ನೇಮಕ ಮಾಡಿ ಬುಧವಾರ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಡಿ.ಎಲ್.ಮಹೇಶ್ವರ್ 2018ರ ಜೂನ್ 29ರಂದು ನಿವೃತ್ತರಾಗಿದ್ದರು. ನಂತರ ಒಂದು ತಿಂಗಳ ಅವಧಿಗೆ ಡಾ.ಎಚ್.ಬಿ.ಲಿಂಗಯ್ಯ ಹಂಗಾಮಿ ಕುಲಪತಿಯಾಗಿ ಕೆಲಸ ಮಾಡಿದ್ದರು. ಅದೇ ವರ್ಷ ಜುಲೈ 31ರಂದು ಲಿಂಗಯ್ಯ ಅವರ ನಿವೃತ್ತಿಯ ನಂತರ ಡಾ.ಕೆ.ಎಂ.ಇಂದಿರೇಶ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿದ್ದರು.

ರಾಜ್ಯ ಸರ್ಕಾರದಿಂದ ನೇಮಕಗೊಂಡಿದ್ದ ಶೋಧನಾ ಸಮಿತಿ ಶಿಫಾರಸ್ಸಿನ ಮೇರೆಗೆ ಡಾ.ಕೆ.ಎಂ.ಇಂದಿರೇಶ ಅವರನ್ನು ಪೂರ್ಣಾವಧಿಗೆ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.