ADVERTISEMENT

ನೌಕರರ ಹೋರಾಟ| ಕೋಡಿಹಳ್ಳಿ ಚಂದ್ರಶೇಖರ್ ಎಂಬ ವ್ಯಕ್ತಿಯಿಂದ ಗೊಂದಲ ಎಂದ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 2:09 IST
Last Updated 14 ಡಿಸೆಂಬರ್ 2020, 2:09 IST
ಸೋಮಣ್ಣ
ಸೋಮಣ್ಣ    

ಉಜಿರೆ: ‘ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಒಳ್ಳೆಯ ಬುದ್ಧಿ ಕೊಡಲಿ’ ಎಂದು ಸಚಿವ ವಿ.ಸೋಮಣ್ಣ ಭಾನುವಾರ ಧರ್ಮಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಾರಿಗೆ ನೌಕರರ ಮುಷ್ಕರ ಮಾತುಕತೆ ಮೂಲಕ ಸುಖಾಂತ್ಯ ಕಾಣಲಿದೆ.ಪ್ರತಿಭಟನೆಯನ್ನು ಕಾರ್ಮಿಕ ಸಂಘಟನೆಗಳು ಮಾಡಿದ್ದಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಎಂಬ ಒಬ್ಬ ವ್ಯಕ್ತಿಯಿಂದ ಗೊಂದಲ ಉಂಟಾಗಿದೆ ಎಂದರು.

‘ಆತ ಒಳ್ಳೆಯ ವ್ಯಕ್ತಿ ಎಂದು ತಿಳಿದಿದ್ದೆವು. ಆದರೆ, ಆತನ ಬಗ್ಗೆ ಅತಿಯಾದ ಪ್ರೀತಿಯೇ ಮುಳುವಾಯಿತು. ರಾಜ್ಯದ ಜನತೆಗೆ ಆತನಿಂದಾಗಿ ತುಂಬಾ ತೊಂದರೆ ಉಂಟಾಗಿದೆ. ಅದಕ್ಕಾಗಿ ನಾನು ಮತ್ತು ರಾಜ್ಯದ ಮುಖ್ಯಮಂತ್ರಿ ಕೂಡಾ ರಾಜ್ಯದ ಜನತೆಯ ಕ್ಷಮೆ ಯಾಚಿಸುತ್ತೇವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.