ADVERTISEMENT

ಕೆಪಿಎಸ್‌ಸಿ: 9 ಅಭ್ಯರ್ಥಿಗಳಿಗೆ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 4 ಮೇ 2019, 19:46 IST
Last Updated 4 ಮೇ 2019, 19:46 IST
   

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕ ಸಂಬಂಧ ಹೈಕೋರ್ಟ್‌ ಆದೇಶದ ಅನ್ವಯ ಹೊಸದಾಗಿ 9 ಮಂದಿಯನ್ನು ಸಂದರ್ಶನಕ್ಕೆ ಆಹ್ವಾನಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತೀರ್ಮಾನಿಸಿದೆ.

ಹೈಕೋರ್ಟ್‌ನ 2016ರ ಮೂರನೇ ಆದೇಶದ ಪ್ರಕಾರ, 91 ಅಭ್ಯರ್ಥಿಗಳ ಮೂರನೇ ಮೌಲ್ಯಮಾಪನದ ಅಂಕಗಳನ್ನು ಪರಿಗಣಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಆಯೋಗದ ಕೇಂದ್ರ ಕಚೇರಿಯಲ್ಲಿ ಇದೇ 16ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರ ರವಾನಿಸಲಾಗಿದೆ.

ಅಭ್ಯರ್ಥಿಗಳು: ತ್ರಿವೇಣಿ ಬಿ.ಎಂ., ತ್ರಿವೇಣಿ ಎಂ.ಎಂ., ತಿಮ್ಮಣ್ಣ ಗೌಡ ಎ., ಹೇಮಲತಾ ಕೆ., ಪ್ರಭಾವತಿ ಜೆ., ರಾವ್‌ಸಾಬ್‌ ನಾಮದೇವ ಕಾಂಬ್ಳೆ, ಜಬೀನಾ ಪರ್ವಿನ್‌ ಬಳ್ಳಾರಿ, ರಾಜಶೇಖರ್‌, ಮದನ್‌ ಕೆ.ಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.