ADVERTISEMENT

ಮುಕ್ತ ವಿವಿ: ಪ್ರೊ.ವಿದ್ಯಾಶಂಕರ್‌ ಕುಲಪತಿ

​ಪ್ರಜಾವಾಣಿ ವಾರ್ತೆ
Published 28 ಮೇ 2019, 18:30 IST
Last Updated 28 ಮೇ 2019, 18:30 IST
ಪ್ರೊ.ವಿದ್ಯಾಶಂಕರ್‌
ಪ್ರೊ.ವಿದ್ಯಾಶಂಕರ್‌   

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು)ನೂತನ ಕುಲಪತಿಯನ್ನಾಗಿ ಬೆಂಗಳೂರು ತಾಂತ್ರಿಕ ಕಾಲೇಜಿನ (ಬಿಐಟಿ) ಮೆಕ್ಯಾನಿಕಲ್‌ ವಿಭಾಗದ ಪ್ರಾಧ್ಯಾಪಕ ಎಸ್‌.ವಿದ್ಯಾಶಂಕರ್‌ ಅವರನ್ನು ನೇಮಕ ಮಾಡಲಾಗಿದೆ.

ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ನೇಮಕ ಮಾಡಿದ್ದಾರೆ.ಅವರ ಅಧಿಕಾರ ಮೂರು ವರ್ಷ.ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ವಿಸ್ತರಿತಅಧಿಕಾರ ಅವಧಿ ಇದೇ 31ಕ್ಕೆ ಕೊನೆಗೊಳ್ಳಲಿದೆ.

ವಿದ್ಯಾಶಂಕರ್‌ ಅವರಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊ.ಆರ್‌.ಕೆ.ಸೋಮಶೇಖರ್‌, ಕೆಎಸ್‌ಒಯು ಶೈಕ್ಷಣಿಕ ವಿಭಾಗದ ಡೀನ್‌ ಪ್ರೊ.ಜಗದೀಶ್‌, ಮೈಸೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯವಿಜ್ಞಾನ ವಿಭಾಗದ ಪ್ರೊ.ರವಿಶಂಕರ್‌ ರೈ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗದ ಪ್ರೊ.ಎಂ.ರಾಮಚಂದ್ರ ಅವರ ಹೆಸರನ್ನು ಶೋಧನಾ ಸಮಿತಿಶಿಫಾರಸು ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.