ADVERTISEMENT

ತಿರುಪತಿ ಪ್ಯಾಕೇಜ್ ಪ್ರವಾಸ ವಿಸ್ತರಣೆ

ಮಂಗಳೂರು, ದಾವಣಗೆರೆ, ಶಿವಮೊಗ್ಗ, ಮೈಸೂರಿನಿಂದ ನೇರ ಬಸ್

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:00 IST
Last Updated 26 ಮೇ 2019, 20:00 IST
   

ಬೆಂಗಳೂರು: ಬೆಂಗಳೂರು–ತಿರುಪತಿ ಪ್ಯಾಕೇಜ್‌ಪ್ರವಾಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿ–ತಿರುಮಲಕ್ಕೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಪ್ರವಾಸ ವಿಸ್ತರಿಸಿದೆ.

ಮಂಗಳೂರು, ದಾವಣಗೆರೆ, ಶಿವಮೊಗ್ಗದಿಂದ ತಿರುಪತಿ–ಕಾಳಹಸ್ತಿ ಪ್ಯಾಕೇಜ್‌‍ಪ್ರವಾಸ ಆರಂಭವಾಗಿದೆ.ಐರಾವತ ಕ್ಲಬ್‌ ಕ್ಲಾಸ್‌ ಬಸ್‌ನಲ್ಲಿ ಪ್ರವಾಸ ಕರೆದೊಯ್ಯಲಾಗುವುದು. ಹೋಟೆಲ್‌ನಲ್ಲಿ ಫ್ರೆಶ್‌ಅಪ್, ಪದ್ಮಾವತಿದೇವಿ ದರ್ಶನ, ಉಪಾಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ, ತಿರುಪತಿ ಸ್ಥಳೀಯ ದೇವಸ್ಥಾನಗಳ ದರ್ಶನ, ಕಾಳಹಸ್ತಿ ದೇವಸ್ಥಾನದಲ್ಲಿ ರಾತ್ರಿ ಊಟ ಮತ್ತು ತಂಗಲು ವ್ಯವಸ್ಥೆಮಾಡಲಾಗುವುದು.

ಬೆಳಿಗ್ಗೆ ದೇಗುಲ ದರ್ಶನ, ಉಪಾಹಾರ ಮತ್ತು ಮಧ್ಯಾಹ್ನದ ಊಟ ವ್ಯವಸ್ಥೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ADVERTISEMENT

ಮೈಸೂರು–ತಿರುಪತಿ ಪ್ಯಾಕೇಜ್‌ನಲ್ಲಿಹೋಟೆಲ್‌ನಲ್ಲಿ ಫ್ರೆಶ್‌ಅಪ್, ಪದ್ಮಾವತಿದೇವಿ ದರ್ಶನ, ಉಪಾಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರದರ್ಶನ ಮತ್ತು ಊಟ ಒಳಗೊಂಡಿದೆ.

ಸಾರ್ವಜನಿಕರು ಪ್ಯಾಕೇಜ್‌ ಪ್ರವಾಸಕ್ಕೆ ನಿಗಮದ ಕೌಂಟರ್, ಖಾಸಗಿ ಬುಕಿಂಗ್‌, ಆನ್‌ಲೈನ್ ಮತ್ತು ಮೊಬೈಲ್‌ ಮೂಲಕ 30 ದಿನಗಳ ಮುಂಚಿತವಾಗಿ ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿಗೆ: 7760990034/35, 080–49596666 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.