ADVERTISEMENT

ಕೆಎಸ್‌ಆರ್‌ಟಿಸಿ: ಚಾಲಕ– ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:11 IST
Last Updated 13 ಫೆಬ್ರುವರಿ 2019, 20:11 IST
ಕೆಎಸ್‌ಆರ್‌ಟಿಸಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಬೆಳ್ಳಿ ಪದಕ ಪುರಸ್ಕೃತರಾದ ಚಾಲಕ–ನಿರ್ವಾಹಕರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮತ್ತು ಅಧಿಕಾರಿಗಳು ಚಿತ್ರದಲ್ಲಿದ್ದಾರೆ
ಕೆಎಸ್‌ಆರ್‌ಟಿಸಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಬೆಳ್ಳಿ ಪದಕ ಪುರಸ್ಕೃತರಾದ ಚಾಲಕ–ನಿರ್ವಾಹಕರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮತ್ತು ಅಧಿಕಾರಿಗಳು ಚಿತ್ರದಲ್ಲಿದ್ದಾರೆ   

ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಚಾಲಕ ಕಂ ನಿರ್ವಾಹಕ ಮತ್ತು ನಿರ್ವಾಹಕರಿಗೆ ಬುಧವಾರ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

2016-17ನೇ ಸಾಲಿನ 8 ಮಂದಿ ನಿರ್ವಾಹಕರು, 4 ಮಂದಿ ಚಾಲಕ ಕಂ ನಿರ್ವಾಹಕರು, 2017-18ನೇ ಸಾಲಿನ 23 ನಿರ್ವಾಹಕರು ಮತ್ತು 3 ಚಾಲಕ ಕಂ ನಿರ್ವಾಹಕರು ಬೆಳ್ಳಿ ಪದಕಕ್ಕೆ ಪಾತ್ರರಾದರು. ಪುರಸ್ಕೃತರಿಗೆ 32 ಗ್ರಾಂ ತೂಕದ ಬೆಳ್ಳಿ ಪದಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅವರಿಗೆ ಮಾಸಿಕ ₹ 150 ಭತ್ಯೆ ನೀಡಲಾಗುತ್ತದೆ.

ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪದಕ ಪ್ರದಾನ ಮಾಡಿದರು. ಇದೇ ವೇಳೆಗೆ ನಿರ್ವಾಹಕರ ಕೈಪಿಡಿಯನ್ನೂ ಅವರು ಬಿಡುಗಡೆ ಮಾಡಿದರು.

ADVERTISEMENT

2017– 18ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

ಗೋಪಾಲಕೃಷ್ಣ (ನಿರ್ವಾಹಕ, ಕುಣಿಗಲ್),ಲಕ್ಷ್ಮೀನಾರಾಯಣ (ನಿರ್ವಾಹಕ, ಕೋಲಾರ),ಆದಿ ನಾರಾಯಣ. ವಿ (ನಿರ್ವಾಹಕ, ಕೋಲಾರ * ಮರಣೋತ್ತರ), ಕೆ.ಎನ್.ಈರಪ್ಪ (ನಿರ್ವಾಹಕ,ಕೋಲಾರ),ಗೋಪಾಲ (ಚಾಲಕ ಕಂ ನಿರ್ವಾಹಕ, ಬಾಗೇಪಲ್ಲಿ), ಮಂಜುಳಾ (ನಿರ್ವಾಹಕಿ, ಮಳವಳ್ಳಿ)ಕೃಷ್ಣ (ನಿರ್ವಾಹಕ, ಮದ್ದೂರು), ಎಸ್.ಡಿ.ಬೋರೆಗೌಡ (ನಿರ್ವಾಹಕ,ಮದ್ದೂರು),‌ ಎಂ.ರಾಜು (ನಿರ್ವಾಹಕ, ಕೊಳ್ಳೆಗಾಲ), ಮೆನಿನ್‌ ಪಿಂಟೋ (ನಿರ್ವಾಹಕ, ಉಡುಪಿ), ರಾಜುಕೋಟೆನ್ನವರ (ನಿರ್ವಾಹಕ, ಉಡುಪಿ).

ರಾಮಜೆ ಮೊಗೇರ(ನಿರ್ವಾಹಕ, ಕುಂದಾಪುರ), ರಿಚರ್ಡ್ ಪಿಂಟೋ (ನಿರ್ವಾಹಕ, ಕುಂದಾಪುರ), ವೆಂಕಟರಮಣ ನಾಯ್ಕ (ನಿರ್ವಾಹಕ, ಕುಂದಾಪುರ) ಎ.ಭಾಸ್ಕರ ಶೆಟ್ಟಿ (ನಿರ್ವಾಹಕ, ಕುಂದಾಪುರ), ಅರುಣಕುಮಾರ್ (ನಿರ್ವಾಹಕ, ಕುಂದಾಪುರ), ರಾಮನಾಥ ಮೇಸ್ತ (ನಿರ್ವಾಹಕ, ಕುಂದಾಪುರ),ಜಯಶೀಲ ಶೆಟ್ಟಿ (ನಿರ್ವಾಹಕ, ಕುಂದಾಪುರ).

ಕೃಷ್ಣ ದೇವಾಡಿಗ (ನಿರ್ವಾಹಕ, ಕುಂದಾಪುರ), ನಾಗಪ್ಪ (ನಿರ್ವಾಹಕ, ಕುಂದಾಪುರ), ಮಕ್ಬುಲ್ ಪಟೇಲ್ (ನಿರ್ವಾಹಕ, ಕುಂದಾಪುರ), ಶಂಕರಶೆಟ್ಟಿ (ನಿರ್ವಾಹಕ, ಕುಂದಾಪುರ), ಷಣ್ಮುಖ ಅಜೂರ್ (ನಿರ್ವಾಹಕ ಕುಂದಾಪುರ), ಗಿರಿಧರ (ನಿರ್ವಾಹಕ, ಕುಂದಾಪುರ), ಸಮಿಯುಲ್ಲಾ (ಚಾಲಕ ಕಂ ನಿರ್ವಾಹಕ ಕುಂದಾಪುರ), ರಂಗನಾಥ.ಬಿ (ಚಾಲಕ ಕಂ ನಿರ್ವಾಹಕ, ಮಂಗಳೂರುಘಟಕ-1)

‌ಪದಕ ಪುರಸ್ಕೃತರು

2016-17ನೇ ಸಾಲಿನಲ್ಲಿ ಬೆಳ್ಳಿ ಪದಕ: ವಿ. ಮಾರ್ಕಂಡಯ್ಯ (ನಿರ್ವಾಹಕ ಬೆಂಗಳೂರು ಘಟಕ-1),ಬಸವರಾಜು (ಚಾಲಕ ಕಂ ನಿರ್ವಾಹಕ, ಬೆಂಗಳೂರು ಘಟಕ-1), ಪಿ.ಬಿ. ವಸಂತಕುಮಾರ್, (ಚಾಲಕ ಕಂ ನಿರ್ವಾಹಕ, ಬೆಂಗಳೂರು ಘಟಕ-1), ಮೌಲಾಲಿ ಮುಲ್ಲಾ (ಚಾಲಕ ಕಂ ನಿರ್ವಾಹಕ, ಬೆಂಗಳೂರು ಘಟಕ-2), ಆರ್. ನಾಗರಾಜು (ನಿರ್ವಾಹಕ, ಬೆಂಗಳೂರು ಘಟಕ-4), ರಾಜಕುಮಾರ್ ನಾಯ್ಕ (ನಿರ್ವಾಹಕ, ಕೆ.ಜಿ.ಎಫ್), ಜಿ. ಶಾಂತಾರಾಂ (ನಿರ್ವಾಹಕ, ಚಿಕ್ಕಬಳ್ಳಾಪುರ) ವಿ.ಸಿ. ವೆಂಕಟರಾಮು (ನಿರ್ವಾಹಕ, ಮಂಡ್ಯ),ನವಾಬ್‍ಜಾನ್ (ನಿರ್ವಾಹಕ, ಮಂಡ್ಯ)ಎನ್.ಎಸ್‍ರವಿಕುಮಾರ್ (ಚಾಲಕ ಕಂ ನಿರ್ವಾಹಕ, ಮಂಡ್ಯ), ಕೆ ಸುಧಾಕರ ಶೆಟ್ಟಿ (ನಿರ್ವಾಹಕ, ಉಡುಪಿ), ಶ್ರೀಧರ ಪೂಜಾರಿ (ನಿರ್ವಾಹಕ,ಉಡುಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.