ADVERTISEMENT

ವಿಮಾನನಿಲ್ದಾಣದಲ್ಲಿ ಡಿ.ಕೆ.ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಕರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 11:08 IST
Last Updated 26 ಅಕ್ಟೋಬರ್ 2019, 11:08 IST
   

ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್‌ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌, ಶಾಸಕ ಕೃಷ್ಣ ಬೈರೇಗೌಡ ಸಹಿತ ಹಲವು ಪ್ರಮುಖರು ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹೂಗುಚ್ಛ ನೀಡುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತ ಕೋರಿದರು.

ಗಡ್ಡ ಬಿಟ್ಟ ಡಿಕೆಶಿ: ಡಿಕೆಶಿ ಅವರು ಜೈಲಿನಲ್ಲಿ ಇದ್ದಾಗ ಶೇವ್‌ ಮಾಡಿಕೊಂಡಿಲ್ಲ. ಗಡ್ಡದೊಂದಿಗೇ ಅವರು ಜೈಲಿನಿಂದ ಹೊರಗೆ ಬಂದಿದ್ದು, ಬೆಂಗಳೂರಿಗೆ ಬಂದಿಳಿಯುವಾಗ ಸಹ ಅವರು ಶೇವ್ ಮಾಡಿಕೊಂಡಿಲ್ಲ. ಬಹುಶಃ ಮನೆ ದೇವರ ದರ್ಶನ ಮಾಡಿದ ಬಳಿಕ ಶೇವ್‌ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.