ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೂವರಿಗೆ ಗೌರವ ಪ್ರಶಸ್ತಿ ಪ್ರಕಟಿಸಿದೆ.
ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಪ್ರಕಾಶ ಗಡ್ಕರ್ (ಕಲಬುರ್ಗಿ), ಬಿ.ಆರ್.ಕೊರ್ತಿ (ದಾವಣಗೆರೆ) ಹಾಗೂ ಜಿ.ಎಂ.ಹೆಗಡೆ ತಾರಗೋಡ (ಶಿರಸಿ) ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ತಲಾ ₹50 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.
ವಾರ್ಷಿಕ ಕಲಾ ಬಹುಮಾನಕ್ಕೆಗಣೇಶ್ ಪಿ.ದೊಡ್ಡಮನಿ (ಬೆಂಗಳೂರು), ವಿನಾಯಕ ರಾ.ಚಿಕ್ಕೋಡಿ (ಬಾಗಲ
ಕೋಟೆ), ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್), ವಿನಾಯಕ ಎಸ್.ಹೊಸೂರ(ಬಾಗಲಕೋಟೆ), ವಿಜಯ್ ಎಸ್.ನಾಗವೇಕರ್ (ಬೆಂಗಳೂರು), ಕೆ.ಎಸ್.ಬಸವರಾಜು (ತುಮಕೂರು), ಭರತ್ಎಂ.ಲದ್ದಿಯವರ (ಧಾರವಾಡ), ಎಂ.ಎಸ್.ಲಿಂಗರಾಜು (ಚಿಕ್ಕಮಗಳೂರು), ಶಿವಕಾಂತ್ ಶೇಖರ್ (ಬೆಂಗಳೂರು) ಹಾಗೂ ತಿಪ್ಪಣ್ಣ ಎಸ್.ಪೂಜಾರಿ (ಕಲಬುರ್ಗಿ) ಅವರು ಆಯ್ಕೆಯಾಗಿದ್ದಾರೆ.ಬಹುಮಾನ ತಲಾ ₹25 ಸಾವಿರ ಹಾಗೂ ಫಲಕ ಒಳಗೊಂಡಿದೆ.
‘ಮಾರ್ಚ್ 21ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.