ಬೆಂಗಳೂರು: ‘ಯಾವುದೇ ಹಿಂಸಾಚಾರದಿಂದ ತೊಂದರೆಗೆ ಒಳಗಾದ, ದೌರ್ಜನ್ಯಕ್ಕೆ ಒಳಗಾಗುವ ಎಲ್ಲ ಸಮುದಾಯದ ಬಡ ಜನರಿಗೆ ಅದಾಲತ್ ಲೀಗ್ ಏಡ್ ಫೌಂಡೇಷನ್ ಮೂಲಕ ಉಚಿತ ಕಾನೂನು ನೆರವನ್ನು ನೀಡಲಾಗುವುದು’ ಎಂದು ಫೌಂಡೇಷನ್ನ ಅಧ್ಯಕ್ಷ
ಯು. ನಿಸಾರ್ ಅಹ್ಮದ್ ಭಾನುವಾರ ಇಲ್ಲಿ ತಿಳಿಸಿದರು.
‘ಸಿಎಎ, ಎನ್ಆರ್ಸಿ ಮತ್ತಿತರ ವಿಷಯಗಳ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ನ್ಯಾಯಾಂಗದಲ್ಲಿನ ಪರಿಣಿತರು, ಹೈಕೋರ್ಟ್ ವಕೀಲರು ಈ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ . ಜೆ.ಜೆ. ನಗರದಲ್ಲಿ ಮೊದಲ ಶಿಬಿರ ಆಯೋಜಿಸಲಾಗುವುದು’ ಎಂದರು.
ನೆರವಿಗಾಗಿ, ಫೌಂಡೇಷನ್ನ ಕಾರ್ಯದರ್ಶಿ, ಹೈಕೋರ್ಟ್ ವಕೀಲ ಶಾಹುಲ್ ಹಮೀದ್ (99864–70671) ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.