ಕೆಆರ್ಎಸ್ ಬೃಂದಾನವ ಉದ್ಯಾನದಲ್ಲಿ ನವೀಕೃತ, ಹೈಟೆಕ್ ಸಂಗೀತ ಕಾರಂಜಿ ಪ್ರಾರಂಭ
₹1.80 ಕೋಟಿ ಹಣ ಖರ್ಚು ಮಾಡಿ ಸಂಗೀತ ಕಾರಂಜಿಯನ್ನು ನವೀಕರಣಗೊಳಿಸಿರುವ ಕಾವೇರಿ ನೀರಾವರಿ ನಿಗಮ
ನವೀಕೃತ, ಹೈಟೆಕ್ ಸಂಗೀತ ಕಾರಂಜಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಕತ್ತಲು- ಬೆಳಕಿನಾಟದ ನಡುವೆ ಚಿಮ್ಮಿದ ನೀರು, ಹೊರಹೊಮ್ಮಿದ ಕೃತಕ ಮಂಜು ಜನರ ಮನಸೂರೆಗೊಂಡಿತು.
2ಡಿ ನಾಝಲ್ ತಂತ್ರಜ್ಞಾನದ ಮೂಲಕ ಕಲಾತ್ಮತ ರೂಪ ಸೃಷ್ಟಿ
ಆಕರ್ಷಕ ವಿದ್ಯುತ್ ದೀಪಗಳ ಬೆಳಕಿನಲ್ಲಿ, ನೀರಿನ ಬುಗ್ಗೆಗಳ ಲಾಸ್ಯ
ಮಹಾರಾಷ್ಟ್ರ ಮೂಲದ ಕಂಪನಿ ಕಾರಂಜಿಯನ್ನು ನವೀಕರಣಗೊಳಿಸಿದೆ.
ಹೊಸ ಕಾರಂಜಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ನೀಡಲಿದೆ.
ರಜಾ ದಿನಗಳಲ್ಲಿ ರಾತ್ರಿ 9 ರವರೆಗೂ ಹೈಟೆಕ್ ಸಂಗೀತ ಕಾರಂಜಿ ಪ್ರದರ್ಶನ ಇರಲಿದೆ.
ಬೃಂದಾವನದ ಉತ್ತರ ಭಾಗದಲ್ಲಿರುವ ಕಾರಂಜಿಯ ನೃತ್ಯ ವೈಭವ
ಕಾರಂಜಿಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡ ಸಾವಿರಕ್ಕೂ ಹೆಚ್ಚು ಜನರು
ಕತ್ತಲು- ಬೆಳಕಿನಾಟದ ನಡುವೆ ಚಿಮ್ಮಿದ ನೀರಿನ ಸೊಬಗು
ಕೆಆರ್ಎಸ್ ಬೃಂದಾನವ ಉದ್ಯಾನದಲ್ಲಿ ನವೀಕೃತ, ಹೈಟೆಕ್ ಸಂಗೀತ ಕಾರಂಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.