ADVERTISEMENT

29 ಮಣಿಪುರ ವಿದ್ಯಾರ್ಥಿನಿಯರಿಗೆ ನೆರವು: ಜಮೀರ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 23:32 IST
Last Updated 2 ಆಗಸ್ಟ್ 2023, 23:32 IST
ಜನ್ಮದಿನದ ಪ್ರಯುಕ್ತ ಜಮೀರ್ ಅಹಮದ್ ಖಾನ್ ಅವರು ಮಣಿಪುರದ ವಿದ್ಯಾರ್ಥಿಗಳ ಜತೆಗೆ ಉಪಹಾರ ಸೇವಿಸಿದರು.
ಜನ್ಮದಿನದ ಪ್ರಯುಕ್ತ ಜಮೀರ್ ಅಹಮದ್ ಖಾನ್ ಅವರು ಮಣಿಪುರದ ವಿದ್ಯಾರ್ಥಿಗಳ ಜತೆಗೆ ಉಪಹಾರ ಸೇವಿಸಿದರು.   

ಬೆಂಗಳೂರು: ಚಾಮರಾಜಪೇಟೆಯ ಸೇಂಟ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ಮಣಿಪುರದ 29 ವಿದ್ಯಾರ್ಥಿನಿಯರ ಶಿಕ್ಷಣ ಹಾಗೂ ಆರೈಕೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಭರವಸೆ ನೀಡಿದ್ದಾರೆ. 

ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಉಪಾಹಾರ ಸೇವಿಸುವ ಮೂಲಕ ಅವರು ಮಂಗಳವಾರ ಜನ್ಮದಿನ ಆಚರಿಸಿಕೊಂಡರು. 

ಮಣಿಪುರ ವಿದ್ಯಾರ್ಥಿಗಳ ಜತೆಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಅವರು, ‘ಇಲ್ಲಿ ಸುರಕ್ಷಿತವಾಗಿರಿ. ನಿಮಗೆ ಏನೇ ವ್ಯವಸ್ಥೆ ಬೇಕಾದರೂ ಮಾಡುತ್ತೇನೆ’ ಎಂದು ತಿಳಿಸಿ, ₹2 ಲಕ್ಷ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.