ADVERTISEMENT

ಬೆಳಗಾವಿಯಲ್ಲಿ ಮರಾಠಿಗರ ಮಹಾಮೇಳ, ಪ್ರಮುಖ ನಾಯಕರಿಗೆ ಆಹ್ವಾನ: ಎಂಇಎಸ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 4:29 IST
Last Updated 9 ಡಿಸೆಂಬರ್ 2022, 4:29 IST
   

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್‌ ಡಿಪೊದಲ್ಲಿ ಡಿ. 19ರಂದು ಮರಾಠಿಗರ ಮಹಾಮೇಳ ಆಯೋಜಿಸಲಾಗಿದ್ದು, ಇದಕ್ಕೆ ಮಹಾರಾಷ್ಟ್ರದ ಎಲ್ಲ ಪಕ್ಷಗಳ ಪ್ರಮುಖ ನಾಯಕರೂ ಭಾಗವಹಿಸಬೇಕು ಎಂದು ಕೋರಿ ಎಂಇಎಸ್‌ ಮುಖಂಡರು ಗುರುವಾರ ಪತ್ರ ಬರೆದಿದ್ದಾರೆ.

ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಇದಕ್ಕೆ ವಿರುದ್ಧವಾಗಿ ‘ಮಹಾ ಮೇಳಾವ್‌’ ನಡೆಸಲು ಉದ್ದೇಶಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಸಂಕ್ಷಿಪ್ತವಾಗಿ ಆಯೋಜಿಸಿದ ಈ ಸಮಾವೇಶವನ್ನು ಈ ಬಾರಿ ಬೃಹದ್ದಾಗಿ ಆಯೋಜನೆ ಮಾಡಲು ಸಿದ್ಧತೆ ನಡೆದಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ, ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್‌ ದೇಸಾಯಿ, ಹಿರಿಯ ಮುಖಂಡರಾದ ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ರಾಜ್ ಠಾಕ್ರೆ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌, ಶಿವಸೇನೆ, ರಾಷ್ಟ್ರವಾದಿ ಕಾಂಗ್ರೆಸ್‌ನ ನಾಯಕರಿಗೂ ಸ್ಥಳೀಯ ಮುಖಂಡರು ಪತ್ರ ಬರೆದಿದ್ದಾರೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.