ADVERTISEMENT

ಬೂದನೂರು; ಅಪೂರ್ಣ ರಸ್ತೆಯಲ್ಲೇ ಸಂಚರಿಸಲಿರುವ ಮೋದಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:48 IST
Last Updated 11 ಮಾರ್ಚ್ 2023, 15:48 IST
ಬೂದನೂರು ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದು
ಬೂದನೂರು ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದು   

ಮಂಡ್ಯ: ನಗರದ ಅಮರಾವತಿ ಹೋಟೆಲ್‌ ಬಳಿ ದಶಪಥ ಪ್ರವೇಶಿಸುವ ಪ್ರಧಾನಿ ನರೇಂದ್ರ ಮೋದಿ ಅವರು ತಾಲ್ಲೂಕಿನ ಬೂದನೂರು ಬಳಿ ಅಪೂರ್ಣ ಕಾಮಗಾರಿ ನಡುವೆಯೇ ಸಂಚಾರ ಮಾಡಲಿದ್ದಾರೆ.

ಬೂದನೂರು ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್‌ 12ರೊಳಗೆ ಮುಗಿಸಲು ಸಿಬ್ಬಂದಿ ಶತಪ್ರಯತ್ನ ಮಾಡಿದ್ದಾರೆ, ಆದರೂ ಪೂರ್ಣಗೊಂಡಿಲ್ಲ. ಎಡಭಾಗದಲ್ಲಿ ತರಾತುರಿಯಲ್ಲಿ ಡಾಂಬರ್‌ ಹಾಕಿದ್ದಾರೆ. ಇನ್ನೊಂದು ಕಡೆಯ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ. ಎಡಭಾಗದಲ್ಲಿ ಮೋದಿ ಸಂಚಾರಕ್ಕಷ್ಟೇ ಅಪೂರ್ಣ ಕಾಮಗಾರಿಯನ್ನೇ ಮುಕ್ತಗೊಳಿಸಲಾಗಿದೆ.

ಬೂದನೂರು ಬಳಿ ಎರಡೂವರೆ ಕಿ.ಮೀ ಸೇತುವೆ ಕಾಮಗಾರಿ ಬಾಕಿ ಇದೆ. ಶನಿವಾರ ರಾತ್ರಿಯವರೆಗೂ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇತ್ತು. ಸಿಬ್ಬಂದಿ ಸಮರೋಪಾದಿಯಲ್ಲಿ ವಿದ್ಯುತ್‌ ದೀಪ, ಸಸಿ ನೆಡುವ ಕೆಲಸ ಮಾಡುತ್ತಲೇ ಇದ್ದರು.

ADVERTISEMENT

ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.