ADVERTISEMENT

ವಿಶ್ವನಾಥ್‌ ಸಚಿವರಾಗದಿದ್ದರೆ ಜಗತ್ತು ಮುಳುಗಿ ಹೋಗುತ್ತದೆಯೇ: ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 19:22 IST
Last Updated 2 ನವೆಂಬರ್ 2020, 19:22 IST
ಶ್ರೀನಿವಾಸಪ್ರಸಾದ್‌ ಮತ್ತು ಎಚ್‌. ವಿಶ್ವನಾಥ್‌
ಶ್ರೀನಿವಾಸಪ್ರಸಾದ್‌ ಮತ್ತು ಎಚ್‌. ವಿಶ್ವನಾಥ್‌   

ಚಾಮರಾಜನಗರ:‘ಅಡಗೂರು ಎಚ್‌.ವಿಶ್ವನಾಥ್‌ ಅವರು ಸಚಿವ ಸಂಪುಟಕ್ಕೆ ಸೇರುತ್ತಾರೋ ಇಲ್ಲವೋ ಎಂಬ ಭವಿಷ್ಯ ಹೇಳುವುದಕ್ಕೆ ಆಗುವುದಿಲ್ಲ. ಇದು ಮುಖ್ಯವಾದ ಪ್ರಶ್ನೆಯೂ ಅಲ್ಲ. ಅವರಿಗೆ ಸಚಿವ ಸ್ಥಾನ ಸಿಗದೇ ಹೋದರೆ ಜಗತ್ತು ಮುಳುಗಿ ಹೋಗುತ್ತದೆಯೇ? ರಾಜ್ಯದ ಮುಂದೆ ಸಂಕಷ್ಟ ಇದೆ. ಅದರ ಬಗ್ಗೆ ಯೋಚನೆ ಮಾಡಬೇಕು. ಎಲ್ಲರ ಸಹಕಾರ ಪಡೆದು ಅದನ್ನು ನಿಭಾಯಿಸಬೇಕಾಗಿದೆ’ ಎಂದು ಸಂಸದ ಶ್ರೀನಿವಾಸ ಪ್ರಸಾದ್‌ ಹೇಳಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸುಭದ್ರ ಸರ್ಕಾರ ಇದೆ. ಇನ್ನೂ ಎರಡೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT