ADVERTISEMENT

ಚಾಕು ತಿವಿದುಕೊಂಡ ಎಂ.ಟಿ.ಬಿ ಅಭಿಮಾನಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:42 IST
Last Updated 1 ಡಿಸೆಂಬರ್ 2019, 13:42 IST
ಮೆರವಣಿಗೆಯಲ್ಲಿ ಏಕಾಏಕಿ ಚಾಕುವಿನಿಂದ ತಿವಿದುಕೊಂಡ ಎಂಟಿಬಿ ಅಭಿಮಾನಿ
ಮೆರವಣಿಗೆಯಲ್ಲಿ ಏಕಾಏಕಿ ಚಾಕುವಿನಿಂದ ತಿವಿದುಕೊಂಡ ಎಂಟಿಬಿ ಅಭಿಮಾನಿ   

ಹೊಸಕೋಟೆ: ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು. ಆಗ ನಗರದ ನಿವಾಸಿ, ನಾಗರಾಜ್ ಅಭಿಮಾನಿಯಾದ ಬೇಬಿ ಮಂಜು ಎಂಬ ಯುವಕ ಏಕಾಏಕಿ ಚಾಕುವಿನಿಂದ ಇರಿದುಕೊಂಡರು.

ನಾಗರಾಜ್‌ಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ ಎಂದರು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾ
ಯಿತು. ಅವರ ಸ್ಥಿತಿ ಸ್ಥಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT