ADVERTISEMENT

ದಕ್ಷಿಣ ‌ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 14:41 IST
Last Updated 15 ಜೂನ್ 2022, 14:41 IST
ಮಧು ಜಿ. ಮಾದೇಗೌಡ
ಮಧು ಜಿ. ಮಾದೇಗೌಡ   

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇಲ್ಲಿನ ಮಹರ್ಷಿ ವಾಲ್ಮೀಕಿ‌ ರಸ್ತೆಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಪ್ರಗತಿಯಲ್ಲಿದ್ದು, ಮೊದಲ ಹಂತ ಮುಕ್ತಾಯದ ವೇಳೆಗೆ ಕಾಂಗ್ರೆಸ್ ಮುಂದಿದೆ ಎಂದು ಪ್ರಾದೇಶಿಕ ಆಯುಕ್ತರೂ ಆಗಿರುವ ಚುನಾವಣಾಧಿಕಾರಿ ಡಾ.ಜಿ.ಸಿ. ಪ್ರಕಾಶ್ ತಿಳಿಸಿದರು.

ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಮೊದಲ ಸುತ್ತಿನಲ್ಲಿ 49,700 ಮತಗಳ ಎಣಿಕೆ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ 16,137 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮೈ.ವಿ. ರವಿಶಂಕರ್ 13,479, ಜೆಡಿಎಸ್‌ನ ಎಚ್‌.ಕೆ. ರಾಮು 8,512, ಪಕ್ಷೇತರ ಸದಸ್ಯ ಪ್ರಸನ್ನ ಎನ್.ಗೌಡ 3,142, ವಿನಯ್ 1,892 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ 2658 ಮತಗಳಿಂದ ಮುಂದಿದೆ.

ಈವರೆಗೆ ಬರೋಬ್ಬರಿ 3711 ಮತಗಳು ತಿರಸ್ಕೃತಗೊಂಡಿವೆ!

ADVERTISEMENT

ಎರಡನೇ ಸುತ್ತಿನಲ್ಲಿ ಉಳಿದ ಮತಗಳ ಎಣಿಕೆ ನಡೆಯಲಿದೆ. ಅದು ಪೂರ್ಣಗೊಳ್ಳಲು ಕನಿಷ್ಠ ಮೂರು ತಾಸುಗಳು ಸಮಯ ಬೇಕಾಗಬಹುದು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಶೇ 50ಕ್ಕಿಂತ ಹೆಚ್ಚಿನ ಮತ ಪಡೆದಿದ್ದರೆ ಆ ಅಭ್ಯರ್ಥಿಯನ್ನು ವಿಜೇತರೆಂದು ಘೋಷಿಸಲಾಗುವುದು. ಇಲ್ಲವಾದಲ್ಲಿ ಮುಂದಿನ ಎಣಿಕೆ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದರು.

2ನೇ ಸುತ್ತಿನ ಮತ‌ ಎಣಿಕೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.