ADVERTISEMENT

ನಿಗೂಢ ಕಾಯಿಲೆ: 40 ರಾಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:59 IST
Last Updated 14 ಮಾರ್ಚ್ 2023, 22:59 IST
ಯಸಳೂರು ಹೋಬಳಿಯ ಯಡಕೇರಿ ಗ್ರಾಮದ ದಿನೇಶ್ ಎಂಬುವವರ ಕರು ನಿಗೂಢ ರೋಗದಿಂದ ಮೃತಪಟ್ಟಿದೆ
ಯಸಳೂರು ಹೋಬಳಿಯ ಯಡಕೇರಿ ಗ್ರಾಮದ ದಿನೇಶ್ ಎಂಬುವವರ ಕರು ನಿಗೂಢ ರೋಗದಿಂದ ಮೃತಪಟ್ಟಿದೆ   

ಹೆತ್ತೂರು (ಸಕಲೇಶಪುರ ತಾಲ್ಲೂಕು): ಸಮೀಪದ ಯಸಳೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂರು ವಾರಗಳಿಂದ ಜಾನುವಾರುಗಳು ನಿಗೂಢ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದು, ಪಶು ವೈದ್ಯಾಧಿಕಾರಿಗಳಿಗೂ ಕಾರಣ ತಿಳಿದಿಲ್ಲ.

ಐಗೂರು ಪಂಚಾಯಿತಿ ವ್ಯಾಪ್ತಿಯ ಯಡಿಕೆರೆಯಲ್ಲಿ 8, ಚಿಕ್ಕಲ್ಲೂರಿನಲ್ಲಿ 14, ಕುಂಬಾರಗೇರಿಯಲ್ಲಿ 6 ದನ–ಕರು ಗಳು ಸೇರಿ 40 ಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ವೆಂಕಟೇಶ್, ‘ಪ್ರಯೋಗಾಲಯದಿಂದ ಒಂದೆರಡು ದಿನಗಳಲ್ಲಿ ವರದಿ ಬರಲಿದ್ದು, ನಿಖರ ಕಾರಣ ತಿಳಿಯಲಿದೆ. ನಂತರ ಇತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಕೆಲವರು ಜಾನುವಾರುಗಳ ಕಳೇಬರವನ್ನು ನೀರಿನಲ್ಲಿ ಬಿಸಾಡುವುದರಿಂದ ಬದುಕಿರುವ ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆ ಇದೆ. ಕಡ್ಡಾಯವಾಗಿ 10 ಅಡಿ ಆಳದ ಗುಂಡಿ ತೆಗೆದು ಜಾನುವಾರು ಹೂಳಬೇಕು’ ಎಂದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಜಾನುವಾರುಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.