ADVERTISEMENT

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ನಲಪಾಡ್‌ ಆಗ್ರಹ

ಮೊಹಮ್ಮದ್ ನಲಪಾಡ್‌‌ ನೇತೃತ್ವದಲ್ಲಿ ಸಿದ್ದರಾಮಯ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 18:52 IST
Last Updated 11 ಸೆಪ್ಟೆಂಬರ್ 2020, 18:52 IST
ನಲಪಾಡ್‌ ಹ್ಯಾರಿಸ್‌
ನಲಪಾಡ್‌ ಹ್ಯಾರಿಸ್‌   

ಬೆಂಗಳೂರು: ಪ್ರಸಕ್ತ ವರ್ಷ ರಾಜ್ಯ ಯುವ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಆಗ್ರಹಿಸಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ ನೇತೃತ್ವದ ತಂಡ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ಅವರನ್ನು ಭೇಟಿ ಮಾಡಿದ ನಲಪಾಡ್‌ ನೇತೃತ್ವದ ತಂಡ, ‘ಕೊರೊನಾ ಸೋಂಕು ಹರಡು
ತ್ತಿರುವ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಕಷ್ಟವಾಗುತ್ತದೆ. ಚುನಾವಣಾ ಪ್ರಕ್ರಿಯೆ ನಡೆಸುವುದಕ್ಕೂ ಸಾಕಷ್ಟು ತಯಾರಿ ಅಗತ್ಯ. ಈ ಎಲ್ಲವನ್ನೂ ಪರಿಗಣಿಸಿ ಈ ಬಾರಿ ಚುನಾವಣೆ ಕೈಬಿಡಬೇಕು. ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿತು.

ಚುನಾವಣಾ ಪ್ರಕ್ರಿಯೆಯ ಕುರಿತೂ ಈ ತಂಡ ಸಿದ್ದರಾಮಯ್ಯ ಅವರಲ್ಲಿ ದೂರು ಸಲ್ಲಿಸಿದೆ. ಇತರ ರಾಜ್ಯಗಳಲ್ಲಿ 1985ರ ನಂತರ ಜನಿಸಿದವರಿಗಷ್ಟೇ ಯುವ ಕಾಂಗ್ರೆಸ್‌ ಸದಸ್ಯತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ರಾಜ್ಯದಲ್ಲಿ ನಾಲ್ಕು ತಿಂಗಳ ರಿಯಾಯ್ತಿ ನೀಡಲಾಗಿದೆ. ಕೆಲವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ
ದಿಂದ ಈ ರೀತಿ ಮಾಡಲಾಗಿದೆ ಎಂದು ಈ ತಂಡ ದೂರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.