ADVERTISEMENT

ಸಂಸದ ಕಟೀಲ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಮೊರೆ ಹೋದ ವಕೀಲ

​ಪ್ರಜಾವಾಣಿ ವಾರ್ತೆ
Published 17 ಮೇ 2019, 16:17 IST
Last Updated 17 ಮೇ 2019, 16:17 IST
   

ತುಮಕೂರು: ‘ಗೋಡ್ಸೆ ಒಬ್ಬರನ್ನು ಕೊಂದ, ರಾಜೀವ್‌ ಗಾಂಧಿ 17 ಸಾವಿರ ಜನರನ್ನು ಕೊಲೆ ಮಾಡಿದ್ದು, ಯಾರು ಹೆಚ್ಚು ಕ್ರೂರಿಗಳು’ ಎಂದು ಟ್ವೀಟ್ ಮಾಡಿದ ದಕ್ಷಿಣ ಕನ್ನಡ ಸಂಸದ ನಳಿನಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಯುವ ವಕೀಲ ರಮೇಶ್ ನಾಯಕ್ ಅವರು ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಳಿನ್‌ಕುಮಾರ್ ಅವರು ಟ್ವೀಟರ್‌ನಲ್ಲಿ ನೀಡಿದ ಹೇಳಿಕೆ, ಒಂದು ದೃಶ್ಯ ಮಾಧ್ಯಮ, ಒಂದು ಇಂಗ್ಲಿಷ್ ಮುದ್ರಣ ಮಾಧ್ಯಮದ ವರದಿ ಉಲ್ಲೇಖಿಸಿ ರಮೇಶ್ ನಾಯಕ್ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನಗರದ ಕ್ಯಾತ್ಸಂದ್ರ ಠಾಣೆಯಲ್ಲಿ ನಳಿನ್‌ಕುಮಾರ್ ಕಟೀಲ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

‘ನ್ಯಾಯಾಲಯವು ನಾನು ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ್ದು, 27ಕ್ಕೆ ವಿಚಾರಣೆಗೆ ಬರಲಿದೆ ಎಂದು ರಮೇಶ್‌ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.