ADVERTISEMENT

ಸಿದ್ದರಾಮಯ್ಯ ಕದ್ದು ತಿನ್ನುವ ಭ್ರಷ್ಟಾಚಾರಿ: ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಮೇ 2022, 16:27 IST
Last Updated 29 ಮೇ 2022, 16:27 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಚಿತ್ರದುರ್ಗ:‘ಅಧಿಕಾರಕ್ಕಾಗಿ ರಾಷ್ಟ್ರವನ್ನು ವಿಭಜನೆ ಮಾಡಿದ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕುಟುಕಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಬಹುತೇಕ ನಾಯಕರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಕೋಟಿ ಬೆಲೆಯ ವಾಚ್ ತೆಗೆದುಕೊಂಡ ಸಿದ್ದರಾಮಯ್ಯ ಯಾರಿಗೂ ಗೊತ್ತಿಲ್ಲದೆ ಕದ್ದು ತಿನ್ನುವ ದೊಡ್ಡ ಭ್ರಷ್ಟಾಚಾರಿ’ ಎಂದು ದೂರಿದರು.

‘ಪದವಿ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದರು. ಲಿಂಗಾಯತರನ್ನು ವಿಭಜನೆ ಮಾಡಲು ಮುಂದಾಗಿದ್ದರು. ನಮ್ಮ ಆಡಳಿತದಲ್ಲಿ ವಿಭಜನೆಗಳಿಲ್ಲ’ ಎಂದು ತಿರುಗೇಟು ನೀಡಿದರು.

‘ಪಠ್ಯಪುಸ್ತಕದ ವಿಚಾರದಲ್ಲಿ ಯಾವ ಜಾತಿ, ಮತ, ಪಂಥ ಮುಖ್ಯವಲ್ಲ. ರಾಮಾಯಣ ವಾಲ್ಮೀಕಿ ಬರೆದಿದ್ದು, ಆದರ್ಶಗಳಷ್ಟೇ ಮುಖ್ಯ. ಭಗವದ್ಗೀತೆ ಬ್ರಾಹ್ಮಣ, ವೈಶ್ಯ, ಶೂದ್ರರ ಮನೆಯಲ್ಲೂ ಇವೆ. ಮೌಲ್ಯಧಾರಿತ ಶಿಕ್ಷಣ ಮುಖ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.