ADVERTISEMENT

ಬಿಎಸ್‌ವೈ ರಾಜೀನಾಮೆ ಹಿಂದೆ ನಳಿನ್ ಮತ್ತು ಸಿಟಿ ರವಿ ಕೈವಾಡವಿದೆ: ಕಾಂಗ್ರೆಸ್ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 13:07 IST
Last Updated 26 ಜುಲೈ 2021, 13:07 IST
ನಳಿನ್ ಕುಮಾರ್ ಕಟೀಲ್ ಮತ್ತು ಸಿಟಿ ರವಿ
ನಳಿನ್ ಕುಮಾರ್ ಕಟೀಲ್ ಮತ್ತು ಸಿಟಿ ರವಿ   

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರ ಹಿಂದೆ ಬಿಜೆಪಿ ಮುಖಂಡರಾದ ನಳಿನ್ ಕುಮಾರ್ ಕಟೀಲ್ ಹಾಗೂ ಸಿ.ಟಿ ರವಿ ಅವರ ಕೈವಾಡವಿದೆ‘ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಆರೋಪಿಸಿದೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಬಿಎಸ್‌ವೈ ಮುಕ್ತ ಬಿಜೆಪಿಅಭಿಯಾನದಲ್ಲಿ ಯಶಸ್ವಿಯಾದ
ಸಿಟಿ ರವಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರಿಗೆಅಭಿನಂದನೆಗಳು‘ ಎಂದಿದೆ.

‘ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!ಯಶಸ್ವಿಯಾಗಿ ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದವರನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಕಣ್ಣೀರು ಸುರಿಸುತ್ತಾ ಇಳಿದು ಹೋಗುವಂತೆ ಮಾಡಿದಿರಿ! ಎಂದು ಸಿಟಿ ರವಿ ಹಾಗೂ ನಳಿನ್ ಅವರನ್ನು ಉದ್ದೇಶಿಸಿ ಕಾಲೆಳದಿದೆ.

ADVERTISEMENT

‘ಮೊನ್ನೆ ಮೊನ್ನೆಯವರೆಗೂ ನಾನೇ ಇನ್ನೆರೆಡು ವರ್ಷ ಸಿಎಂ ಎನ್ನುತ್ತಿದ್ದವರು ಈಗ ಏಕಾಏಕಿ ರಾಜೀನಾಮೆ ನೀಡಿದ ಕಾರಣವೇನು ಹೇಳಿ?ಬಿಎಸ್‌ವೈ ಅವರ ಕಣ್ಣೀರಿಗೆ ನಿಮ್ಮ ದ್ರೋಹವೇ ಕಾರಣವಲ್ಲವೇ?‘ ಎಂದು ಕಾಂಗ್ರೆಸ್, ಬಿಜೆಪಿಯನ್ನು ಕೆಣಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.