ಬೆಳ್ಳಾರೆ: ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ನೆಟ್ಟಾರುವರೆಗೆ ಶುಕ್ರವಾರ ಸಂಜೆ ಬಂದಿದ್ದವಿಧಾನಸಭೆಯ ವಿರೋಧಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರನ್ನು ಭೇಟಿ ಆಗಲು ಕುಟುಂಬದವರು ನಿರಾಕರಿಸಿದರು. ಪ್ರವೀಣ್ ಕುಟುಂಬದವರ ಭೇಟಿ ಸಾಧ್ಯವಾಗದೇ ಅವರು ನೆಟ್ಟಾರು ವೃತ್ತದ ಬಳಿಯಿಂದಲೇ ನಿರ್ಗಮಿಸಿದರು.
’ಮೂರು ದಿನಗಳಿಂದ ಮನೆಗೆ ಸತತವಾಗಿ ಮುಖಂಡರು ಅಭಿಮಾನಿಗಳು ಭೇಟಿ ನೀಡುತ್ತಿರುವುದರಿಂದ ಪ್ರವೀಣ್ ಕುಟುಂಬದವರಿಗೆ ವಿಶ್ರಾಂತಿಗೆಸಮಯವೇ ಇಲ್ಲದ ಸ್ಥಿತಿ ಎದುರಾಗಿದೆ. ಪ್ರವೀಣ್ ಅವರ ಹತ್ತಿರದ ಬಂಧುಗಳು ವಿಶ್ರಾಂತಿಯಲ್ಲಿರುವುದರಿಂದ ಭೇಟಿಯಾಗಲು ನಿರಾಕರಿಸಿದ್ದಾರೆ. ಪ್ರವೀಣ್ ಅವರ ಚಿಕ್ಕಪ್ಪನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೆಟ್ಟಾರುವರೆಗೆ ಬಂದಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಪ್ರವೀಣ್ ಕುಟುಂಬದವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ನೆಟ್ಟಾರು ವೃತ್ತದ ಬಳಿಯಿಂದಲೇ ನಿರ್ಗಮಿಸಿದೆ’ ಎಂದು ಯು.ಟಿ.ಖಾದರ್ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.
‘ವಾರದ ಹಿಂದೆ ಕೊಲೆಯಾದ ಕಳಂಜದ ಮಸೂದ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ’ ಎಂದು ಯು.ಟಿ.ಖಾದರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.