ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ, ಕಲ್ಲತ್ತಿಗಿರಿ ಧಾರ್ಮಿಕ ಕ್ಷೇತ್ರಗಳಲ್ಲಿ ನೀರಿನ ಅಭಾವ ತೀವ್ರ ಸ್ವರೂಪ ಪಡೆದಿಲ್ಲ.
ತುಂಗಾ ನದಿ ತಟದಲ್ಲಿರುವ ಶೃಂಗೇರಿ, ಭದ್ರಾ ನದಿ ದಂಡೆಯಲ್ಲಿರುವ ಹೊರನಾಡು, ಕಳಸ ಪುಣ್ಯಕ್ಷೇತ್ರಗಳಲ್ಲಿ ಅಭಾವವಾಗುವಷ್ಟು ನೀರಿನ ಕೊರತೆ ಇಲ್ಲ. ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕಲ್ಹತ್ತಿ ಗಿರಿಯಲ್ಲಿಯೂ ನೀರು ಕಡಿಮೆಯಾಗಿದೆ. ಕೈಕಾಲು, ಮುಖ ತೊಳೆಯಲು, ಸ್ನಾನ ಮಾಡಲು ಸಾಕಾಗುಷ್ಟು ನೀರು ಹರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.