ಸಿಂದಗಿ (ವಿಜಯಪುರ): ‘ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಈಗ ಅಯೋಮಯ. ಜೆಡಿಎಸ್ನ ವ್ಯಕ್ತಿಯನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮಾಡಿರುವುದು ನೋಡಿದರೆ ಆ ಪಕ್ಷಕ್ಕೆ ಎಂಥ ದುಸ್ಥಿತಿ ಬಂದಿದೆ ಎಂಬುದು ಗೊತ್ತಾಗುತ್ತದೆ. ಈಗಿನದ್ದು ಮೂಲ ಕಾಂಗ್ರೆಸ್ ಅಲ್ಲ;ಡುಪ್ಲಿಕೇಟ್ ಕಾಂಗ್ರೆಸ್’ ಎಂದು ಶಾಸಕ ಎಚ್.ಡಿ.ರೇವಣ್ಣ ಟೀಕಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಕೋಮುವಾದಿಗಳ ಜೊತೆ ಮಂಡ್ಯ-ತುಮಕೂರು ಚುನಾವಣೆಯಲ್ಲಿ ಶಾಮೀಲಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿತು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಆಸೆ ಇರದಿದ್ದರೂ ಕಾಂಗ್ರೆಸ್ ನವರೇ ಬಂದು ಕೋಮುವಾದಿಗಳನ್ನು ದೂರಿಡಲು ಮುಖ್ಯಮಂತ್ರಿಯಾಗಲು ಕೇಳಿಕೊಂಡಿದ್ದರು. ಮನೆ, ಮನೆಯಲ್ಲಿ ಒಡೆದು ಆಳುವಂತಹ ಕೀಳುಮಟ್ಟದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.