ಹರಿಹರ: ‘ಹರನ ಉಪಾಸಕರಾದ ವೀರಶೈವ ಲಿಂಗಾಯತ ಪಂಚಮಸಾಲಿಗಳು ಮತ್ತು ಹರಿಯ ಉಪಾಸಕ
ರಾದ ವಾಲ್ಮೀಕಿ ಸಮುದಾಯದವರು ಭಾವನಾತ್ಮಕವಾಗಿ ಒಂದಾಗಿರಬೇಕು. ಈ ಎರಡೂ ಸಮುದಾಯಗಳವರು ಅಸಂಘಟಿತರಾಗಿ ಇರುವಾಗಲೇ 21 ಮಂದಿ ಶಾಸಕರಾಗಿದ್ದಾರೆ. ಈ ಸಂಖ್ಯೆಯನ್ನು 51ಕ್ಕೆ ತಲುಪಿಸಬೇಕು’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
‘ಪಂಚಮಸಾಲಿಗಳನ್ನು ಬೇರೆಯವರು ಇಲ್ಲಿಯವರೆಗೆ ಬಳಸಿಕೊಂಡರು. ಇನ್ನು ಜಾಗೃತರಾಗಲು ಈ ಜಾತ್ರೆ ಹಮ್ಮಿಕೊಳ್ಳಲಾಗಿದೆ.
‘ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಯಾಕೋ ಖಡಕ್ ನಿರ್ಧಾರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.