ಬೆಂಗಳೂರು: ಏಪ್ರಿಲ್ 2006ಕ್ಕೂ ಮೊದಲು ಸರ್ಕಾರಿ ಸೇವೆಗೆ ಸೇರಿ ನಂತರ ಇತರೆ ಇಲಾಖೆಗಳಲ್ಲಿನ ಬೇರೆ ಹುದ್ದೆಗಳಿಗೆ ಮರು ನೇಮಕವಾದವರಿಗೂ (ಇನ್ ಸರ್ವಿಸ್) ಹಳೇ ಪಿಂಚಣಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯ
ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿ, ಒಂದು ಅಧಿಸೂಚನೆ ಅಡಿ ಸೇವಾ ಸಕ್ರಮಾತಿ ಹೊಂದಿದ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಒಂದೇ ಪಿಂಚಣಿ ನಿಯಮ ಅನ್ವಯಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅನುದಾನಕ್ಕೆ ಒಳಪಟ್ಟ ಸಮಯದಲ್ಲಿ ನೇಮಕವಾಗಿ 2006ರ ನಂತರ ಆದೇಶ ಪಡೆದ ಉಪನ್ಯಾಸಕರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಅಲ್ಪಸಂಖ್ಯಾತರು ಸಂಪಾದಕರಾಗಿರುವ ಪತ್ರಿಕೆಗಳಿಗೂ ಪ್ರೋತ್ಸಾಹಕ ಜಾಹೀರಾತು ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ನ ಕೆ.ಅಬ್ದುಲ್ ಜಬ್ಬಾರ್ ಅವರಿಗೆ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.