ಬೆಂಗಳೂರು: ‘ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದಿರುವ ನಿಮ್ಮ ಧೈರ್ಯ ಅಭಿನಂದನೀಯ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅವರ ಸರಣಿ ಟ್ವೀಟ್ಗಳಿಗೆ ಬಿಜೆಪಿ ಹೀಗೆ ಪ್ರತಿಕ್ರಿಯಿಸಿದೆ.
‘ಕಾನೂನು ಪ್ರಕಾರ ‘ಪಾರದರ್ಶಕ ಕಾಯ್ದೆ’ಯ ಉಲ್ಲಂಘನೆಯೂ ಅಪರಾಧವಲ್ಲವೇ?’ ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ’ ಎಂದು ಬಿಜೆಪಿ ಕಾಲೆಳೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.