ADVERTISEMENT

ವಿವಿಧ ತಾಂಡಾಗಳಲ್ಲಿ ಒಳ ಮೀಸಲಾತಿ ವಿರೋಧ, ನಿಲ್ಲದ ಆಕ್ರೋಶ

ವಿವಿಧ ತಾಂಡಾಗಳಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ l ರಾಜಕಾರಣಿಗಳಿಗೆ ಪ್ರವೇಶ ನಿರ್ಬಂಧಿಸಿ ಫ್ಲೆಕ್ಸ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:47 IST
Last Updated 1 ಏಪ್ರಿಲ್ 2023, 18:47 IST
ಕಿಲಾರದಹಳ್ಳಿ ತಾಂಡಾದಲ್ಲಿ ಒಳ ಮೀಸಲಾತಿ ಶಿಫಾರಸು ವಿರೋಧಿಸಿ ಶನಿವಾರ ಪ್ರತಿಭಟನೆ‌ ನಡೆಯಿತು
ಕಿಲಾರದಹಳ್ಳಿ ತಾಂಡಾದಲ್ಲಿ ಒಳ ಮೀಸಲಾತಿ ಶಿಫಾರಸು ವಿರೋಧಿಸಿ ಶನಿವಾರ ಪ್ರತಿಭಟನೆ‌ ನಡೆಯಿತು   

ಶಿರಾ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ಬಂಜಾರ ಸಮುದಾಯದವರು ಶನಿವಾರ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಿಲಾರದಹಳ್ಳಿ ತಾಂಡಾದಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿರುವ ಸಮುದಾಯ, ಯಾವುದೇ ರಾಜಕೀಯ ಪಕ್ಷದವರು ಮತ್ತು ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶ ಮಾಡದಂತೆ ಗ್ರಾಮದಲ್ಲಿ ಫ್ಲೆಕ್ಸ್‌ ಹಾಕಿದ್ದಾರೆ. ಕಿಲಾರದಹಳ್ಳಿ ತಾಂಡಾವು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.

ಒಳ ಮೀಸಲಾತಿ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ.

ADVERTISEMENT

‘ಸರ್ಕಾರದ ನಿಲುವಿನಿಂದ ಲಂಬಾಣಿ ಜನಾಂಗಕ್ಕೆ ಅನ್ಯಾಯವಾಗಲಿದೆ. ಮೀಸಲಾತಿ ನಮ್ಮ‌ ಹಕ್ಕು, ಭಿಕ್ಷೆಯಲ್ಲ‌. ಹೀಗಾಗಿ ಕೇಂದ್ರ ಸರ್ಕಾರಕ್ಕೆ‌ ಮಾಡಿರುವ ಶಿಫಾರಸು ವಾಪಸ್‌ ಪಡೆಯಬೇಕು’ ಎಂದರು. ಶಿರಾ ತಾಲ್ಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷ ನಾಯಕ್, ಚಂದ್ರನಾಯಕ್ ಪಾಲ್ಗೊಂಡಿದ್ದರು.

ಧಾರವಾಡ: ಸದಾಶಿವ ಆಯೋಗ ವರದಿ ಜಾರಿಯಿಂದ ಸಮುದಾಯಕ್ಕಿದ್ದ ಮೀಸಲಾತಿ ಸೌಲಭ್ಯ ಕಡಿತಗೊಂಡಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ನಗರದಲ್ಲಿ ಶನಿವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ರೀ ಸೇವಾಲಾಲ ಲಂಬಾಣಿ ಹಿತವರ್ಧಕ ಸಂಘದ ಪದಾಧಿಕಾರಿಗಳು, ಯುವಕರು ಹಾಗೂ ಮುಖಂಡರು ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡರು. ಜಾಥಾದುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.