ADVERTISEMENT

ಬಾಲಕನ ಮರಕ್ಕೆ ಕಟ್ಟಿ ಹಾಕಿ ಥಳಿಸಿದರು

ಗೊರಬಾಳ: ಮೇಕೆ ಕಳ್ಳತನ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:28 IST
Last Updated 4 ನವೆಂಬರ್ 2018, 19:28 IST
ಇಳಕಲ್ ಸಮೀಪದ ಗೊರಬಾಳದಲ್ಲಿ ಮೇಕೆ ಕದ್ದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ.
ಇಳಕಲ್ ಸಮೀಪದ ಗೊರಬಾಳದಲ್ಲಿ ಮೇಕೆ ಕದ್ದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ.   

ಬಾಗಲಕೋಟೆ: ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮದಲ್ಲಿ ಶನಿವಾರ ಆಡು (ಮೇಕೆ) ಕದ್ದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ.

ಇಳಕಲ್‌ನ ಆಲಂಪುರ ಪೇಟೆಯ ನಿವಾಸಿಯಾದ 16 ವರ್ಷದ ಬಾಲಕ ತನ್ನ ಮಾವನೊಂದಿಗೆ ಸೇರಿ ಗೊರಬಾಳದ ದೊಡ್ಡಿಯೊಂದರಲ್ಲಿ ಆಡು ಕದ್ದಿದ್ದನು ಎಂದು ಹೇಳಲಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಹತ್ತಾರು ಕುರಿಗಳ ಕಳ್ಳತನ ಆಗಿದ್ದವು. ಅವುಗಳ ಹುಡುಕಾಟದಲ್ಲಿ ತೊಡಗಿದ್ದ ಕುರಿಗಳ ಮಾಲೀಕರು, ಶನಿವಾರ ಅಮೀನಗಡದ ಕುರಿ ಸಂತೆಗೆ ಬಂದಾಗ ಅಲ್ಲಿ ಕದ್ದ ಆಡಿನೊಂದಿಗೆ ಬಾಲಕ ಸಿಕ್ಕುಬಿದ್ದಿದ್ದಾನೆ. ಈ ವೇಳೆ ಆತನೊಂದಿಗೆ ಇದ್ದ ಮಾವ ಪರಾರಿಯಾಗಿದ್ದಾನೆ. ಬಾಲಕನನ್ನು ಗ್ರಾಮಕ್ಕೆ ಕರೆದೊಯ್ದು ಊರ ಮಧ್ಯೆ ಗುಡಿಯ ಎದುರಿನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಬಾಲಕನನ್ನು ಹಿಡಿದು ತಂದು ಮರಕ್ಕೆ ಕಟ್ಟಿ ಹೊಡೆಯಲಾಗಿದೆ. ಘಟನೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.