ADVERTISEMENT

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ: ಚನ್ನಣ್ಣವರ, ದೇವರಾಜು ಸಿಐಡಿಗೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:53 IST
Last Updated 9 ಜೂನ್ 2021, 21:53 IST
ಸಿಐಡಿ ಕಚೇರಿ–ಸಾಂದರ್ಭಿಕ ಚಿತ್ರ
ಸಿಐಡಿ ಕಚೇರಿ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಐಪಿಎಸ್‌ ಅಧಿಕಾರಿಗಳಾದ ರವಿ ಡಿ.ಚನ್ನಣ್ಣನವರ ಮತ್ತು ಕೆ.ಜಿ.ದೇವರಾಜು ಅವರನ್ನು ಸಿಐಡಿ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇವರೂ ಸೇರಿ ಒಟ್ಟು 12 ಪೊಲೀಸ್‌ ವರಿಷ್ಠಾಧಿಕಾರಿಗಳ ವರ್ಗಾವಣೆಯಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು:

ರಾಹುಲ್‌ ಕುಮಾರ್‌ ಶಹಪೂರವಾಡ್‌– ಎಸ್ಪಿ, ತುಮಕೂರು ಜಿಲ್ಲೆ , ಡಾ.ವಂಶಿ ಕೃಷ್ಣ– ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ.ಎ.ಎನ್.ಪ್ರಕಾಶ್‌ ಗೌಡ– ಎಸ್ಪಿ ಐಎಸ್‌ಡಿ, ಬೆಂಗಳೂರು, ಪ್ರದೀಪ್‌ ಗುಂಟಿ– ಉಪ ಪೊಲೀಸ್‌ ಆಯುಕ್ತ, ಕಾನೂನು– ಸುವ್ಯವಸ್ಥೆ, ಮೈಸೂರು ನಗರ, ದೆಕ್ಕಾ ಕಿಶೋರ್‌ ಬಾಬು– ಎಸ್ಪಿ, ಕೋಲಾರ ಜಿಲ್ಲೆ , ಅಡ್ಡೂರು ಶ್ರೀನಿವಾಸುಲು– ಉಪ ಪೊಲೀಸ್‌ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ, ಕಲಬುರ್ಗಿ ನಗರ.

ADVERTISEMENT

ಹನುಮಂತರಾಯ– ಎಸ್ಪಿ, ಹಾವೇರಿ ಜಿಲ್ಲೆ, ಆರ್‌.ಚೇತನ– ಎಸ್ಪಿ, ಮೈಸೂರು ಜಿಲ್ಲೆ, ಸಿ.ಬಿ.ರಿಷ್ಯಂತ್– ಎಸ್ಪಿ, ದಾವಣಗೆರೆ ಜಿಲ್ಲೆ, ಕಾರ್ತಿಕ್‌ ರೆಡ್ಡಿ–ಎಸ್ಪಿ, ನಿಸ್ತಂತು ವಿಭಾಗ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.